ಶಿವಮೊಗ್ಗ: ಪೊಲೀಸ್‌ ಬೆಂಗಾವಲಿನಲ್ಲಿ ಆಕ್ಸಿಜನ್‌ ಟ್ಯಾಂಕರ್‌ ಆಗಮನ!

Update: 2021-05-07 05:55 GMT

ಶಿವಮೊಗ್ಗ, ಮೇ 7: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದಂತೆ ಆಕ್ಸಿಜನ್‌ ಬೇಡಿಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಿಗೆ ನಿರಂತರ ಆಕ್ಸಿಜನ್‌ ಪೂರೈಕೆಯಾಗಬೇಕಿದೆ. ಇಂದು ಬೆಳಗ್ಗೆ ಶಿವಮೊಗ್ಗಕ್ಕೆ ಬಂದ ಆಕ್ಸಿಜನ್‌ ಟ್ಯಾಂಕರ್ ಗೆ ಪೊಲೀಸ್‌ ಬೆಂಗಾವಲು ಒದಗಿಸಲಾಗಿತ್ತು.

ಬಳ್ಳಾರಿಯಿಂದ ಒಂದು ಟ್ಯಾಂಕರ್‌ ಆಕ್ಸಿಜನ್‌ ಇಂದು ಶಿವಮೊಗ್ಗಕ್ಕೆ ಬಂದಿದೆ. ಹೊಳೆಹೊನ್ನೂರು ಮಾರ್ಗವಾಗಿ ಟ್ಯಾಂಕರ್‌ ಲಾರಿ ಆಗಮಿಸುತ್ತಿದ್ದಂತೆ ಶಿವಮೊಗ್ಗ ಪೊಲೀಸರು ಎಸ್ಕಾರ್ಟ್‌ ನೀಡಿದರು. ಬಿ.ಎಚ್‌.ರಸ್ತೆ ಮೂಲಕ ಮೆಗ್ಗಾನ್‌ ಆಸ್ಪತ್ರೆಗೆ ಆಕ್ಸಿಜನ್‌ ಟ್ಯಾಂಕರ್‌ ತಲುಪಿತು.

ಮೆಗ್ಗಾನ್‌ ಆಸ್ಪತ್ರೆಯಲ್ಲಿರುವ ಆಕ್ಸಿಜನ್‌ ಸಂಗ್ರಹ ಪ್ಲಾಂಟ್‌ಗೆ ಟ್ಯಾಂಕರ್ ನಲ್ಲಿದ್ದ ಆಕ್ಸಿಜನ್‌ ಭರ್ತಿ ಮಾಡಲಾಗಿದೆ. ಈಗ ಭರ್ತಿಯಾಗಿರುವ ಆಕ್ಸಿಜನ್‌ ಒಂದೆ ದಿನಕ್ಕೆ ಖಾಲಿಯಾಗಲಿದೆ. ನಾಳೆ ಮತ್ತೊಂದು ಟ್ಯಾಂಕರ್‌ ಆಕ್ಸಿಜನ್‌ ಪೂರೈಕೆಯಾಗಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News