ಹುದುಗೂರು, ಅರೆಯೂರು ವ್ಯಾಪ್ತಿಯಲ್ಲಿ ಹುಲಿ ಕಾರ್ಯಾಚರಣೆ ಚುರುಕು
Update: 2021-05-08 12:41 GMT
ಮಡಿಕೇರಿ ಮೇ 8 : ಕೂಡಿಗೆ ಗಾ.ಪಂ ವ್ಯಾಪ್ತಿಯ ಹುದುಗೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮತ್ತು ಕುಕನೂರು ಸಮೀಪದ ಅರೆಯೂರು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಆತಂಕ ಮೂಡಿಸಿರುವ ಹುಲಿಯ ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ.
ಕಳೆದ ಒಂದು ವಾರದಿಂದ ಗ್ರಾಮದ ವಿವಿಧೆಡೆ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಸ್ಥಳೀಯ ನಿವಾಸಿ ಸಿ.ಎನ್.ಈರಪ್ಪ ಎಂಬುವವರ ಕಾಫಿ ತೋಟದ ಕೊಟ್ಟಿಗೆಯಲ್ಲಿದ್ದ ಒಂದು ಎತ್ತನ್ನು ಹುಲಿ ಕೊಂದು ಹಾಕಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಸಹಕಾರ ಪಡೆದು ಕಾಫಿ ತೋಟದಲ್ಲಿ ಬೋನ್ ಇರಿಸಿದ್ದಾರೆ. ಸೋಮವಾರಪೇಟೆ ಎಸಿಎಫ್ ನೆಹರು ವಲಯ ಅರಣ್ಯಾಧಿಕಾರಿ ಶಮ, ಅರಣ್ಯ ರಕ್ಷಕ ರಾಜಣ್ಣ ಮತ್ತಿತರರು ಹುಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.