ಪತ್ರಕರ್ತ ಚಲುವರಾಜ್ ಕೊರೋನಗೆ ಬಲಿ
Update: 2021-05-08 13:35 GMT
ಮಂಡ್ಯ, ಮೇ8: ‘ಸಂಜೆ ಇಂಪು’ ಪತ್ರಿಕೆ ಸಂಪಾದಕ ಚಲುವರಾಜ್(59) ಕೋವಿಡ್ನಿಂದ ಶನಿವಾರ ಬೆಳಗ್ಗೆ ಸಾವಿಗೀಡಾಗಿದ್ದಾರೆ. ಒಂದು ವಾರದಿಂದ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಲುವರಾಜ್ ಅವರ ನಿಧನಕ್ಕೆ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.