ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ
Update: 2021-05-10 11:01 GMT
ಶಿವಮೊಗ್ಗ, ಮೇ 10: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ಅವರು ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್ ಡೌನ್ ಯಶಸ್ವಿಯಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಜನರು ಸಾಯುತ್ತಿರುವ ಸಂದರ್ಭದಲ್ಲಿ ಬರೀ ಟೀಕೆ ಮಾಡುತ್ತಿದ್ದೀರ. ಎ.ಸಿ. ರೂಮಲ್ಲಿ ಕುಳಿತು ಟೀಕೆ ಮಾಡ್ತಾರೋ, ಎಲ್ಲಿ ಕುಳಿತು ಟೀಕಿಸುತ್ತಾರೋ ಗೊತ್ತಿಲ್ಲ. ಆದರೆ ಒಳ್ಳೆ ಸಲಹೆಗಳಿದ್ದಲ್ಲಿ ಕೊಡಲಿ ಎಂದರು.
ನಾವೇನು ಪ್ರಿಂಟ್ ಮಾಡ್ತೀವಾ?
ಲಾಕ್ ಡೌನ್ ಮಾಡುವಾಗ ಕುಟುಂಬಗಳಿಗೆ ಹತ್ತು ಸಾವಿರ ರೂ. ಕೊಡಿ ಅಂತಾರೆ. ನಾವೇನು ಹಣ ಪ್ರಿಂಟ್ ಮಾಡ್ತೀವಾ ಪ್ರಶ್ನಿಸಿದ ಈಶ್ವರಪ್ಪ, ಒಳ್ಳೆಯ ಸಲಹೆ ಕೊಡಲಿ, ನಾವು ಅದನ್ನು ಅಳವಡಿಸಿಕೊಳ್ಳುತ್ತೇವೆ ಎಂದರು.