ರಾಜ್ಯದಲ್ಲಿಂದು ಕೊರೋನ ಸೋಂಕಿಗೆ 476 ಮಂದಿ ಮೃತ್ಯು: 38,603 ಪ್ರಕರಣಗಳು ದೃಢ

Update: 2021-05-17 16:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 17: ರಾಜ್ಯದಲ್ಲಿ ಸೋಮವಾರದಂದು 38,603 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 476 ಜನರು ಸೋಂಕಿಗೆ ಬಲಿಯಾಗಿದ್ದು, 34,635 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 22,42,065ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 22,313ಕ್ಕೆ ತಲುಪಿದೆ. 
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 6,036,39ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

476 ಸೋಂಕಿತರು ಬಲಿ: ಬಾಗಲಕೋಟೆ 4, ಬಳ್ಳಾರಿ 17, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 239, ಬೀದರ್ 4, ಚಾಮರಾಜನಗರ 8, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 3, ಚಿತ್ರದುರ್ಗ 1, ದಕ್ಷಿಣ ಕನ್ನಡ 6, ದಾವಣಗೆರೆ 3, ಧಾರವಾಡ 5, ಗದಗ 4, ಹಾಸನ 29,  ಹಾವೇರಿ 10, ಕಲಬುರಗಿ 15, ಕೊಡಗು 4, ಕೋಲಾರ 8, ಕೊಪ್ಪಳ 2, ಮಂಡ್ಯ 10, ಮೈಸೂರು 5, ರಾಯಚೂರು 4, ರಾಮನಗರ 6, ಶಿವಮೊಗ್ಗ 15, ತುಮಕೂರು 14, ಉಡುಪಿ 5, ಉತ್ತರ ಕನ್ನಡ 15, ವಿಜಯಪುರ 9, ಯಾದಗಿರಿ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 38,603 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 305, ಬಳ್ಳಾರಿ 2,322, ಬೆಳಗಾವಿ 1,748, ಬೆಂಗಳೂರು ಗ್ರಾಮಾಂತರ 426, ಬೆಂಗಳೂರು ನಗರ 13,338, ಬೀದರ್ 172, ಚಾಮರಾಜನಗರ 516, ಚಿಕ್ಕಬಳ್ಳಾಪುರ 799, ಚಿಕ್ಕಮಗಳೂರು 732, ಚಿತ್ರದುರ್ಗ 407, ದಕ್ಷಿಣ ಕನ್ನಡ 817, ದಾವಣಗೆರೆ 747, ಧಾರವಾಡ 972, ಗದಗ 475, ಹಾಸನ 2,324, ಹಾವೇರಿ 142, ಕಲಬುರಗಿ 695, ಕೊಡಗು 442, ಕೋಲಾರ 713, ಕೊಪ್ಪಳ 470, ಮಂಡ್ಯ 1,087, ಮೈಸೂರು 1,980, ರಾಯಚೂರು 562, ರಾಮನಗರ 397, ಶಿವಮೊಗ್ಗ 1,322, ತುಮಕೂರು 1,915, ಉಡುಪಿ 897, ಉತ್ತರ ಕನ್ನಡ 1,288, ವಿಜಯಪುರ 233, ಯಾದಗಿರಿ ಜಿಲ್ಲೆಯಲ್ಲಿ 360 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News