ವ್ಯಾಕ್ಸಿನ್ ತೆಗೆಯಬೇಡಿ ಎಂದು ಚರ್ಚ್‍ಗಳಲ್ಲಿ ಅಪಪ್ರಚಾರ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

Update: 2021-05-19 09:37 GMT

ಚಿಕ್ಕಮಗಳೂರು, ಮೇ 19: ವ್ಯಾಕ್ಸಿನ್ ತೆಗೆಯಬೇಡಿ ಎಂದು ಕೆಲವು ಕಡೆ ಚರ್ಚ್‍ಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಮೂಡಿಗೆರೆ, ಆಲ್ದೂರಿನ ಕೆಲಭಾಗದಲ್ಲಿ ಈ ಅಪಪ್ರಚಾರ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮತಾಂತರಗೊಂಡವರು ಚರ್ಚ್‍ಗೆ ಹೋದಾಗ ಅಪಪ್ರಚಾರ ಮಾಡಲಾಗುತ್ತಿದೆ. ಯಾರು, ಏಕೆ ಹೀಗೆ ಹೇಳುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು. ಅವರು ವ್ಯಾಕ್ಸಿನ್ ತೆಗೆದುಕೊಳ್ಳುತ್ತಾರೆ, ಆದರೆ ಬೇರೆಯವರಿಗೆ ಬೇಡ ಎನ್ನುತ್ತಾರೆ ಎಂದು ದೂರಿದರು.

ಕ್ಯಾಥೋಲಿಕ್ ಚರ್ಚ್ ಹೇಳಿದ್ದು ಅಂತಲ್ಲ, ಅದರಲ್ಲೇ ಬೇರೆ ಚರ್ಚ್ ಇರಬಹುದು. ಫ್ರಾಟಸ್ಟೆಂಟ್, ಸೆಂಥಕೋಸ್ಟ್ ಈ ರೀತಿ ಇತ್ತೀಚೆಗೆ ಬಂದ ಚರ್ಚ್‍ಗಳಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ತನಿಕೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News