ರಾಜ್ಯದಲ್ಲಿ 8,249 ಕೊರೋನ ಪ್ರಕರಣಗಳು ದೃಢ: 159 ಸೋಂಕಿತರು ಸಾವು

Update: 2021-06-11 17:13 GMT

ಬೆಂಗಳೂರು, ಜೂ.11: ರಾಜ್ಯದಲ್ಲಿ ಶುಕ್ರವಾರ 8,249 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 159 ಜನರು ಸೋಂಕಿಗೆ ಬಲಿಯಾಗಿದ್ದು, 14,975 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 27,47,539ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 32,644ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 203769ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

159 ಸೋಂಕಿತರು ಬಲಿ: ಬಾಗಲಕೋಟೆ 4, ಬಳ್ಳಾರಿ 9, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 48, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 2, ಚಿತ್ರದುರ್ಗ 1, ದಕ್ಷಿಣ ಕನ್ನಡ 3, ದಾವಣಗೆರೆ 4, ಧಾರವಾಡ 9, ಗದಗ 3, ಹಾಸನ 2, ಹಾವೇರಿ 10, ಕಲಬುರಗಿ 1, ಕೊಡಗು 1, ಕೋಲಾರ 3,  ಕೊಪ್ಪಳ 2, ಮಂಡ್ಯ 2, ಮೈಸೂರು 20, ರಾಯಚೂರು 2,  ರಾಮನಗರ 1, ಶಿವಮೊಗ್ಗ 7, ತುಮಕೂರು 5, ಉಡುಪಿ 1, ಉತ್ತರ ಕನ್ನಡ 2, ವಿಜಯಪುರ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 8,249 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 73, ಬಳ್ಳಾರಿ 189, ಬೆಳಗಾವಿ 436, ಬೆಂಗಳೂರು ಗ್ರಾಮಾಂತರ 234, ಬೆಂಗಳೂರು ನಗರ 1,154, ಬೀದರ್ 9, ಚಾಮರಾಜನಗರ 162, ಚಿಕ್ಕಬಳ್ಳಾಪುರ 168, ಚಿಕ್ಕಮಗಳೂರು 332, ಚಿತ್ರದುರ್ಗ 123, ದಕ್ಷಿಣ ಕನ್ನಡ 506, ದಾವಣಗೆರೆ 260, ಧಾರವಾಡ 217, ಗದಗ 66, ಹಾಸನ 733, ಹಾವೇರಿ 65, ಕಲಬುರಗಿ 29, ಕೊಡಗು 189, ಕೋಲಾರ 179, ಕೊಪ್ಪಳ 98, ಮಂಡ್ಯ 366, ಮೈಸೂರು 817, ರಾಯಚೂರು 61, ರಾಮನಗರ 57, ಶಿವಮೊಗ್ಗ 429, ತುಮಕೂರು 576, ಉಡುಪಿ 215, ಉತ್ತರ ಕನ್ನಡ 311, ವಿಜಯಪುರ 174, ಯಾದಗಿರಿ ಜಿಲ್ಲೆಯಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 48 ಜನರು ಸಾವು

ರಾಜಧಾನಿಯಲ್ಲಿ ಶುಕ್ರವಾರದಂದು 1,154 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 48 ಜನರು ಮೃತಪಟ್ಟಿದ್ದಾರೆ. 4,769 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 11,92,886 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 15,263 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 10,85,862 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News