ರಾಜಾರಾಮ ರಾವ್

Update: 2021-06-14 14:29 GMT

ಕಾರ್ಕಳ : ಸಾಣೂರು ನಿವಾಸಿ ರಾಜಾರಾಮ ರಾವ್ (55) ಸೋಮವಾರ ನಿಧನರಾಗಿರುತ್ತಾರೆ.

ವೃತ್ತಿಯಲ್ಲಿ ಟೈಲರಿಂಗ್, ಗೂಡ್ಸ್ ಟೆಂಪೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕ ಹಿಂದೂ ರುದ್ರಭೂಮಿ ಕರಿಯಕಲ್ಲು ಕಾರ್ಕಳ ಇಲ್ಲಿ ಕಳೆದ ಹಲವಾರು ವರ್ಷಗಳಿಂದ ಮೃತಪಟ್ಟ ಸಾವಿರಾರು ಶವಗಳನ್ನು ದಹನ ಮಾಡಿರುತ್ತಾರೆ.

ಹಲವಾರು ಸಂಘ ಸಂಸ್ಥೆಗಳು ಇವರ ಕಾರ್ಯವನ್ನು ಗುರುತಿಸಿ ಸನ್ಮಾನ ಮಾಡಿರುತ್ತಾರೆ. ಕ್ರೀಡೆ, ಭಜನೆ, ರಕ್ತದಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ತಂದೆ, ಪತ್ನಿ, ಪುತ್ರಿ ಹಾಗು ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ