ಶಿವಮೊಗ್ಗ: ಕಾಡು ಹಂದಿ ದಾಳಿ; ಮಹಿಳೆಗೆ ಗಂಭೀರ ಗಾಯ

Update: 2021-06-21 12:25 GMT

ಶಿವಮೊಗ್ಗ, ಜೂ.21: ತೋಟಕ್ಕೆ ಹುಲ್ಲು ತರಲು ಹೋದ ಕೃಷಿ ಮಹಿಳೆ ಮೇಲೆ ಕಾಡುಹಂದಿ ಏಕಾಏಕಿ ದಾಳಿ ನಡೆಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾ.ಪಂ.ವ್ಯಾಪ್ತಿಯ ಬಾಂದ್ಯದಲ್ಲಿ ನಡೆದಿದೆ.

ತೋಟದಲ್ಲಿ ಹುಲ್ಲು ಕತ್ತರಿಸುವ ಸಮಯದಲ್ಲಿ ಕಾಡು ಹಂದಿ ಲಲಿತಾ(39) ಮೇಲೆ ದಾಳಿ ನೆಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News