ವಾಲ್ನೂರು- ತ್ಯಾಗತ್ತೂರಿನಲ್ಲಿ ಕಾಡಾನೆಗಳ ದಾಂಧಲೆ: ಬೈಕ್ ಜಖಂ, ಕಾರ್ಮಿಕರು ಪಾರು

Update: 2021-06-21 13:42 GMT

ಮಡಿಕೇರಿ, ಜೂ.21: ವಾಲ್ನೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ರವಿವಾರ ಮಧ್ಯ ರಾತ್ರಿ 1 ಗಂಟೆ ವೇಳೆ ಎಸ್.ಎಸ್.ರಾಮಪ್ಪ ಎಂಬವರ ಮನೆಯಂಗಳಕ್ಕೆ ಬಂದ ಕಾಡಾನೆ ಬೈಕ್ ನ್ನು ಜಖಂ ಗೊಳಿಸಿದೆ. ಹೂಕುಂಡಗಳನ್ನು ನಾಶ ಮಾಡಿದೆ. ಗ್ರಾಮದಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾರ್ಮಿಕರು ಪಾರು 
ಮತ್ತೊಂದೆಡೆ ತ್ತಾಗತ್ತೂರು ಗ್ರಾಮದ ಕೃಷ್ಣಪುರದಲ್ಲಿ ಇಂದು ಬೆಳಗ್ಗೆ ಬೆಳೆಗಾರ ಎ.ವಿ.ಬಸಪ್ಪ ಅವರ ಕಾಫಿ ಕಣಕ್ಕೆ ಒಂಟಿ ಸಲಗ ಲಗ್ಗೆ ಇಟ್ಟಿದೆ. ಕಾಡಾನೆಯ ದಿಢೀರ್ ಆಗಮನದಿಂದ ಬೆಚ್ಚಿಬಿದ್ದ ಮಾಲಕರು ಹಾಗೂ ಕಾರ್ಮಿಕರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News