ವಿಜಯಪುರ: ಮದುವೆಯಾದ ಕೆಲಹೊತ್ತಿನಲ್ಲೇ ಮದುಮಗಳು ಅಪಘಾತಕ್ಕೆ ಬಲಿ

Update: 2021-07-02 08:31 GMT

ವಿಜಯಪುರ, ಜು.2: ಮದುವೆಯಾದ ಕೆಲಹೊತ್ತಿನಲ್ಲೇ ಮದುಮಗಳು ರಸ್ತೆ ಅಪಘಾತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಿಂದಗಿ ತಾಲೂಕಿನ ಬಿ.ಕೆ. ಯರಗಲ್ ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿರುವುದು ವರದಿಯಾಗಿದೆ.

ಮೃತರನ್ನು ರಾಣಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮದುಮಗ ಗಣೇಶ ಚವ್ಹಾಣ ಸೇರಿದಂತೆ ಏಳು ಮಂದಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ರಾಣಿಯ ವಿವಾಹವು ಇಂದು ಬೆಳಗ್ಗೆ ಗಣೇಶ ಚವ್ಹಾಣ ಜೊತೆ ಬಿ.ಕೆ. ಯರಗಲ್ ನಲ್ಲಿ ನೆರವೇರಿದೆ. ಬಳಿಕ ನವವಧುವರ ಕುಟುಂಬಸ್ಥರ ಜೊತೆ ಶಂಕರವಾಡಿಯಿಂದ ಕೊಕಟನೂರ ದೇವಸ್ಥಾನಕ್ಕೆ ಕ್ರೂಸರ್ ವಾಹನದಲ್ಲಿ ಹೊರಟಿದ್ದರು. ಈ ವೇಳೆ ಟೆಂಪೊವೊಂದು ಕ್ರೂಸರ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಢಿಕ್ಕಿ ಹೊಡೆದ ಟೆಂಪೊ ನಿಲ್ಲಿಸದೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News