ಪೆಗಾಸಸ್ ಬೇಹುಗಾರಿಕೆ ತಪ್ಪಿಸಲು ನನ್ನ ಫೋನ್‌ ಕ್ಯಾಮರಾ ಟೇಪ್ ಮಾಡಿದ್ದೇನೆ: ಮಮತಾ ಬ್ಯಾನರ್ಜಿ

Update: 2021-07-21 14:26 GMT

ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಬಳಸುವ ಮೂಲಕ ಅಕ್ರಮ ಕಣ್ಗಾವಲು ಕುರಿತ ವರದಿಗಳ ಮಧ್ಯೆ ಬೇಹುಗಾರಿಕೆ ತಪ್ಪಿಸಲು ತನ್ನ ಫೋನ್‌ನ ಕ್ಯಾಮೆರಾವನ್ನು ಟೇಪ್ ಮಾಡಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ ಎಂದು India Today ವರದಿ ಮಾಡಿದೆ.

"ನಾನು ನನ್ನ ಫೋನ್ ಅನ್ನು ಟೇಪ್  ನಿಂದ ಸುತ್ತಿದ್ದೇನೆ.  ಏಕೆಂದರೆ ಅವರು ಅದು ವೀಡಿಯೊ ಅಥವಾ ಆಡಿಯೊ ಆಗಿರಬಹುದು. ಎಲ್ಲವನ್ನೂ ಕದ್ದಾಲಿಸುತ್ತಾರೆ " ಎಂದು ಮಮತಾ ಬ್ಯಾನರ್ಜಿ  ಅವರು ಫೋನ್ ಪ್ರದರ್ಶಿಸುತ್ತಾ  ಹೇಳಿದರು.  ಅವರ ಫೋನ್  ಕ್ಯಾಮೆರಾ ಟೇಪ್ ನಿಂದ ಮುಚ್ಚಲ್ಪಟ್ಟಿದೆ.

ಭಾರತೀಯ ಜನತಾ ಪಕ್ಷವು ಭಾರತವನ್ನು ಪ್ರಜಾಪ್ರಭುತ್ವದಿಂದ "ಕಣ್ಗಾವಲು ರಾಜ್ಯ" ವನ್ನಾಗಿ ಪರಿವರ್ತಿಸಲು ಕ್ಷ ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು ಹಾಗೂ ಬಿಜೆಪಿ ವಿರುದ್ಧ ಒಂದಾಗಬೇಕೆಂದು ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸಿದರು ಎಂದು NDTV ವರದಿ ಮಾಡಿದೆ.

 ಜುಲೈ 27 ಅಥವಾ ಜುಲೈ 28 ರಂದು ದಿಲ್ಲಿಗೆ ಹೋಗುವುದಾಗಿ ಹೇಳಿದ ಮುಖ್ಯಮಂತ್ರಿ ಬ್ಯಾನರ್ಜಿ  ಪ್ರತಿಪಕ್ಷ ನಾಯಕರೊಂದಿಗೆ ಸಭೆ ನಡೆಸಲು ತಾನು ಲಭ್ಯವಿದ್ದೇನೆ  ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News