ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ನೂತನ ಮುಖ್ಯಮಂತ್ರಿ ಆಯ್ಕೆ: ಸಂಸದ ಬಿ.ವೈ.ರಾಘವೇಂದ್ರ
Update: 2021-07-27 11:57 GMT
ಬೆಂಗಳೂರು, ಜು.27: ರಾಜ್ಯಕ್ಕೆ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಅಚ್ಚರಿ ವ್ಯಕ್ತಿಯೊಬ್ಬರು ಆಯ್ಕೆಯಾಗಬಹುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ನೂತನ ಮುಖ್ಯಮಂತ್ರಿ ಆಯ್ಕೆ ಅಚ್ಚರಿ ಆಯ್ಕೆಯಾಗಬಹುದು ಎಂದು ನುಡಿದರು.
ಎರಡು ತಿಂಗಳ ಹಿಂದೆಯೇ ತಮ್ಮ ತಂದೆಯವರು ರಾಜೀನಾಮೆ ನೀಡುವ ಸಂಕಲ್ಪ ಮಾಡಿದ್ದರು ಎಂದ ಅವರು, ಸಚಿವ ಸಂಪುಟ ರಚನೆಯಲ್ಲಿ ಯಡಿಯೂರಪ್ಪರವರ ಪಾತ್ರವೇ ಇಲ್ಲವೆಂದ ಮೇಲೆ ಮಕ್ಕಳ ಪಾತ್ರ ಎಲ್ಲಿಂದ ಬರುತ್ತದೆ ಎಂದರು.