ನೆರೆ ಸಂತ್ರಸ್ತರ ಕುರಿತು ಶಾಸಕ ಮಹೇಶ್‌ ಕುಮಟಳ್ಳಿ ಉದ್ಧಟತನದ ಮಾತು: ವೀಡಿಯೋ ವೈರಲ್

Update: 2021-07-31 14:04 GMT

ಬೆಳಗಾವಿ, ಜು. 31: "ಫೋನ್ ಬಂದರೆ ಸಾಕು ಒಗಿಲೇನು ಅನಸ್ತೈತಿ, ನಿಮಗೆ ಗೊತ್ತಿಲ್ಲ ಅಷ್ಟ ತಲಿ ಬ್ಯಾರೆ ಬ್ಯಾರೆ ಕಡೆ ಐತಿ, ಒಂದು ಕಡೆ ಹೊತಕೊಂಡ ಮಕ್ಕೋಬೇಕು ಅನಸ್ತೈತಿ. ಮೈಯಲ್ಲ ಬಿಗದೈತಿ, ಫೋನ್ ಬಂದ್ರ ಫೋನ್ ಒಗಿಲೇನು ಅನಸತೈತಿ" ಎಂದು ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ, ನೆರೆ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯದ ಮಾತುಗಳನ್ನಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ.

ಶಾಸಕ ಮಹೇಶ್ ಕುಮಟಳ್ಳಿ ತಮ್ಮ ಆಪ್ತರ ಮುಂದೆ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಪ್ರವಾಹ ಸಂತ್ರಸ್ತರು ಹಾಗೂ ಸಾರ್ವಜನಿಕರು ಶಾಸಕ ಮಹೇಶ್ ಕುಮಟಳ್ಳಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಾಸಕರು ತಮ್ಮ ಆಪ್ತರ ಬಳಿ ಈ ಮಾತುಗಳನ್ನಾಡಿದ್ದು, ಪ್ರವಾಹ ಸಂತ್ರಸ್ತರನ್ನು ನಿರ್ಲಕ್ಷಿಸಿ ಮಾತನಾಡಿರುವುದು ಸರಿಯಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.

ಸಾರ್ವಜನಿಕರು ತಮ್ಮ ವಾಸ್ತವ ಸ್ಥಿತಿಯನ್ನು ಶಾಸಕರ ಮುಂದಲ್ಲದೆ ಇನ್ಯಾರ ಮುಂದೆ ಹೇಳಿಕೊಳ್ಳಬೇಕು. ಶಾಸಕರೇ ಹೀಗೆ ಮಾತನಾಡಿದರೆ ಹೇಗೆ, ಪ್ರವಾಹದಲ್ಲಿ ನೂರಾರು ಜನ ಸಿಲುಕಿ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾಯ ಮಾಡುವುದು ಬಿಟ್ಟು, ಇಂತಹ ನಿರ್ಲಕ್ಷ್ಯದ ಮಾತುಗಳನ್ನು ಆಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಿಮಗ್ ಗೊತ್ತಿಲ್ಲ ಅಷ್ಟ, ತಲಿ ಬ್ಯಾರೆ ಬ್ಯಾರೆ ಕಡೆ ಐತಿ, ಒಂದ ಕಡೆ ಹೊತಕೊಂಡ ಮಕ್ಕೊಬೇಕು ಅನಸ್ತೈತಿ, ಮೈಯಲ್ಲ ಬಿಗದೈತಿ ಯಾವುದಾದ್ರು ಫೋನ್ ಬಂದ್ರ ಮೊಬೈಲ್ ಒಗಿಲೇನ ಅನಸ್ತೈತಿ' ಎಂದು ಶಾಸಕ ಕುಮಟಳ್ಳಿ ವಿಡಿಯೋದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News