ಹಿರಿಯ ಪತ್ರಕರ್ತ ಎಸ್.ಚಂದ್ರಶೇಖರ್ ರಾವ್(ಸಾ.ಚ) ನಿಧನ

Update: 2021-08-09 13:10 GMT

ಬೆಂಗಳೂರು, ಆ.9: ಹಿರಿಯ ಪತ್ರಕರ್ತ ಎಸ್.ಚಂದ್ರಶೇಖರ್ ರಾವ್ (ಸಾ.ಚ) ಸೋಮವಾರ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ.

ಕನ್ನಡದ ಹಲವು ವಾರಪತ್ರಿಕೆ ಮತ್ತು ದೈನಿಕಗಳಲ್ಲಿ ಕೆಲಸ ಮಾಡಿದ್ದಾರೆ. ಹಿರಿಯ ಪತ್ರಕರ್ತ ಜಯಶೀಲರಾವ್ ಸಂಪಾದಕತ್ವದ ಮುಂಜಾನೆ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿದ್ದರು. ನಂತರ ಅಭಿಮಾನಿ ಬಳಗವನ್ನು ಸೇರಿದ್ದರು. ನಂತರ ರಾಜನ್ಸ್ ಬಳಗದಲ್ಲೂ ಕಾರ್ಯನಿರ್ವಹಿಸಿರುತ್ತಾರೆ.

ಪತ್ರಕರ್ತರ ನಡುವೆ ಸಾ.ಚ. ಎಂದೇ ಜನಪ್ರಿಯಗೊಂಡಿದ್ದ ಅವರು ಕರ್ನಾಟಕ ಪ್ರಸಿದ್ಧ ಕ್ರೈಂ ವರದಿಗಾರರು ಕೂಡ ಆಗಿದ್ದರು. ಇಂಥ ಎಸ್.ಚಂದ್ರಶೇಖರ್ ರಾವ್ ಅವರು ಹೃದಯಾಘಾತದಿಂದಾಗಿ ಮೃತರಾಗಿದ್ದಾರೆ. 

ಒಂದೆರಡು ದಿನಗಳ ಹಿಂದಷ್ಟೇ ತಮ್ಮ 75 ವರ್ಷದ ಹುಟ್ಟುಹಬ್ಬವನ್ನು ಸಾ.ಚ ಆಚರಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News