ಕೇಂದ್ರ ಸರಕಾರ, ಈ.ಡಿ ನನ್ನ ಕೈಯಲ್ಲಿ ಇದೆಯಾ: ಶಾಸಕ ಝಮೀರ್ ಅಹ್ಮದ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

Update: 2021-08-09 14:42 GMT

ಬೆಂಗಳೂರು,ಆ.9: 'ಕೇಂದ್ರ ಸರಕಾರ ನನ್ನ ಕೈಯಲ್ಲಿ ಇದೆಯಾ, ಬಿಜೆಪಿ ಸರಕಾರದ ಕೈಯಲ್ಲಿ ಇದೆ. ಈ.ಡಿ., ಐಟಿ, ನನ್ನ ಕೈಯಲ್ಲಿ ಇದೆಯೇ? ಅವರು ಯಾಕೆ ನನ್ನ ಮಾತನ್ನು ಕೇಳುತ್ತಾರೆ' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.  

ನನ್ನ ರಾಜಕೀಯ ಏಳಿಗೆಯನ್ನು ಸಹಿಸಿದೆ ನಾನು ಈ ಹಿಂದೆ ಇದ್ದ ಪಕ್ಷ(ಜೆಡಿಎಸ್)ದ ಮುಖಂಡರೇ ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ದೂರು ನೀಡಿ ದಾಳಿ ಮಾಡಿಸಿದ್ದಾರೆ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದರು.

ಯಾರೋ ಆರೋಪ ಮಾಡಿದರೆ ಚರ್ಚೆ ಮಾಡುವುದು ಅನಾವಶ್ಯಕ. ನನಗೆ ಇದರಲ್ಲಿ ಆಸಕ್ತಿ ಇಲ್ಲ. ನಾನು ನನ್ನ ಕಾರ್ಯಕರ್ತರನ್ನು ಭೇಟಿ ಮಾಡಿಕೊಂಡು, ಅವರ ಕಷ್ಟ, ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ, ಕೃಷಿ ವೃತ್ತಿ ಮಾಡುತ್ತಿದ್ದೇನೆ. ಯಾರೋ ಕೊಡೊ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News