ವಿನಾಶಕಾರಿ ಶಕ್ತಿಗಳ ಭಯ ಹುಟ್ಟಿಸುವ ಸಾಮ್ರಾಜ್ಯಗಳು ತಾತ್ಕಾಲಿಕವಾಗಿರುತ್ತವೆ: ಪ್ರಧಾನಿ ನರೇಂದ್ರ ಮೋದಿ

Update: 2021-08-20 12:10 GMT

ಹೊಸದಿಲ್ಲಿ: ವಿನಾಶಕಾರಿ ಶಕ್ತಿಗಳು ಮತ್ತು ಭಯೋತ್ಪಾದನೆಯ ಮೂಲಕ ಸಾಮ್ರಾಜ್ಯಗಳನ್ನು ನಿರ್ಮಿಸುವ ಸಿದ್ಧಾಂತವನ್ನು ಅನುಸರಿಸುವ ಜನರು ಸ್ವಲ್ಪ ಸಮಯದವರೆಗೆ ಪ್ರಾಬಲ್ಯ ಸಾಧಿಸಬಹುದು, ಆದರೆ ಮಾನವೀಯತೆಯನ್ನು ಶಾಶ್ವತವಾಗಿ ನಿಗ್ರಹಿಸಲು ಸಾಧ್ಯವಿಲ್ಲದ ಕಾರಣ ಅವರ ಅಸ್ತಿತ್ವವೂ ಶಾಶ್ವತವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳು ಬಂದಿವೆ ಎಂದು ndtv.com ವರದಿ ಮಾಡಿದೆ. ಗುಜರಾತ್ ನ  ಸೋಮನಾಥ ದೇವಾಲಯದ ಕೆಲ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.

"ಸೋಮನಾಥ ದೇವಸ್ಥಾನವು ಹಲವು ಬಾರಿ ನಾಶ ಮಾಡಲಾಯಿತು, ವಿಗ್ರಹಗಳನ್ನು ಅನೇಕ ಬಾರಿ ಅಪವಿತ್ರಗೊಳಿಸಲಾಯಿತು ಮತ್ತು ಅದರ ಅಸ್ತಿತ್ವವನ್ನು ಅಳಿಸಲು ಪ್ರಯತ್ನಿಸಲಾಯಿತು. ಆದರೆ ಪ್ರತಿ ವಿನಾಶಕಾರಿ ದಾಳಿಯ ನಂತರ ಅದು ಸಂಪೂರ್ಣ ವೈಭವವನ್ನು ಮರಳಿ ಪಡೆಯಿತು, ಇದು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.

"ವಿನಾಶಕ್ಕಾಗಿ ಶ್ರಮಿಸುವ ಶಕ್ತಿಗಳು ಮತ್ತು ಭಯೋತ್ಪಾದನೆಯಿಂದ ಸಾಮ್ರಾಜ್ಯಗಳನ್ನು ರಚಿಸುವ ಸಿದ್ಧಾಂತವನ್ನು ಅನುಸರಿಸುವವರು ಸ್ವಲ್ಪ ಸಮಯದವರೆಗೆ ಪ್ರಾಬಲ್ಯ ಸಾಧಿಸಬಹುದು, ಆದರೆ ಅವರ ಅಸ್ತಿತ್ವವು ಶಾಶ್ವತವಲ್ಲ ಏಕೆಂದರೆ ಅವರು ಮಾನವೀಯತೆಯನ್ನು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹಿಂದೆ ಸೋಮನಾಥ ದೇವಸ್ಥಾನವನ್ನು ನಾಶಪಡಿಸಿದಾಗ ಇದು ನಿಜವಾಗಿತ್ತು ಮತ್ತು ಇದು ಇಂದಿಗೂ ಸತ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News