`ಕಾಂತ್ರಿಕಾರಿ ಅಂದರೆ ಗುಂಡು ಹೊಡೆಯುವುದು ಅಲ್ಲ': ನಟ ಚೇತನ್‍ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

Update: 2021-08-23 13:28 GMT

ಹುಬ್ಬಳ್ಳಿ, ಆ. 23: `ಕಾಂತ್ರಿಕಾರಿ ಅಂದರೆ ಗುಂಡು ಹೊಡೆಯುವುದು ಅಲ್ಲ' ಎಂದು ಚಿತ್ರನಟ ಚೇತನ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ  ತಿರುಗೇಟು ನೀಡಿದ್ದಾರೆ.

ಸೋಮವಾರ ಹುಬ್ಬಳ್ಳಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ಸಾಲ ಇಲ್ಲದಂತೆ ರೈತರು ಬದುಕು ನಡೆಸುವ ಬಗ್ಗೆ `ಕ್ರಾಂತಿಕಾರಿ' ಎಂದು ಹೇಳಿದ್ದೆ. ಅವರು ನಟರಾದರೆ ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಆ ಕುರಿತು ಹೆಚ್ಚು ಚರ್ಚೆ ಬೇಡ' ಎಂದು ಹೇಳಿದರು.

`ಕರ್ನಾಟಕವನ್ನು 5 ವರ್ಷಗಳ ಮುನ್ನಡೆಸುವ ಸ್ವಾತಂತ್ರ್ಯವಿದ್ದಿದ್ದರೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೊದಲಿಗೆ 2 ಬಾರಿ ಅವರು ಸಿಎಂ ಆಗಿದ್ದಾಗಲೂ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಮಾಡಲಿಲ್ಲ, ಪ್ರಯತ್ನವನ್ನು ಮಾಡಲಿಲ್ಲ. ಮುಖ್ಯವಾಗಿ ಅವರಿಗೆ ಕ್ರಾಂತಿಕಾರಿ ದೃಷ್ಟಿ ಇಲ್ಲ ಮತ್ತು ಯಥಾಸ್ಥಿತಿ ಚಿಂತನೆ ಪ್ರಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು ಇವುಗಳೆಲ್ಲಾ ಅಸಂಬದ್ಧ ಮಾತುಗಳು ಎಂದು ಚೇತನ್ ಟ್ವಿಟ್ಟರ್ ಮೂಲಕ ಎಚ್‍ಡಿಕೆ ಅವರನ್ನು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News