ಗಣೇಶೋತ್ಸವದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಿಟ್ಟಾದ ನಳಿನ್ ಕುಮಾರ್ ಕಟೀಲು

Update: 2021-08-31 16:49 GMT

ಧಾರವಾಡ, ಆ.31: ಪ್ರಸ್ತುತ ಸಾಲಿನ ಗಣೇಶೋತ್ಸವ ಹಬ್ಬಕ್ಕೆ ರಾಜ್ಯ ಸರಕಾರ ಅನುಮತಿ ನೀಡಿಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿಟ್ಟಾದ ಪ್ರಸಂಗ ಜರುಗಿತು. 

ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಗಣೇಶೋತ್ಸವ ಎಲ್ಲಿ ರದ್ದು ಮಾಡಿದೆ. ಅಲ್ಲದೆ, ಕೆಲ ನಿಯಮ ಇವೆ. ಆಚರಣೆಗಿಂತ ಜನರ ಪ್ರಾಣ ಮುಖ್ಯ ಎಂದರು.

ಅಲ್ಲದೆ, ರಾಜ್ಯ ಸರಕಾರ ಗಣೇಶೋತ್ಸವ ಮಾಡೇ ಮಾಡುತ್ತದೆ. ಆದರೆ ಹೇಗೆ ಮಾಡಬೇಕು ಎಂದು ನಿರ್ಣಯ ಆಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News