ಬಸವರಾಜ ಹೊರಟ್ಟಿಗೆ ಸರ್ಕಾರ ಕೂಡಲೇ ನಿವಾಸ ಮಂಜೂರು ಮಾಡಬೇಕು: ದಿನೇಶ್ ಗುಂಡೂರಾವ್

Update: 2021-09-04 12:15 GMT

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಸರ್ಕಾರ ಕೂಡಲೇ ನಿವಾಸ ಮಂಜೂರು ಮಾಡಬೇಕು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ. 

ಈ ಕುರಿತುಯ ಟ್ವೀಟ್ ಮಾಡಿರುವ ಅವರು, 'ಹೊರಟ್ಟಿಯವರಿಗೆ ಸರ್ಕಾರ ನಿವಾಸ ನೀಡದಿರುವುದು‌ ಒಳ್ಳೆಯ‌ ಕ್ರಮವಲ್ಲ. ಸಭಾಪತಿಯ ಸ್ಥಾನಕ್ಕೆ ಅದರದ್ದೇ ಆದ ಗೌರವ-ಘನತೆಯಿದೆ. ಸ್ವತಃ ಸಭಾಪತಿಯವರೇ ನಿವಾಸ ಕೇಳುವುದು ಮುಜುಗರದ ಸನ್ನಿವೇಶ' ಎಂದು ಹೇಳಿದ್ದಾರೆ. 

ಇನ್ನು ಸರಕಾರಿ ನಿವಾಸಕ್ಕಾಗಿ ಹಲವು ಬಾರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ಸಭಾಪತಿ ಬಸವರಾಜ ಹೊರಟ್ಟಿ,  'ನಾನು ರಾಜ್ಯ ಸರಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ಇನ್ನು ಮುಂದೆ ಯಾವತ್ತೂ ಮನೆ ವಿಚಾರ ಪ್ರಸ್ತಾಪ ಮಾಡುವುದಿಲ್ಲ' ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News