ನಿವೃತ್ತ ಶಿಕ್ಷಕ ಮಂಚಿಕೆರೆ ರಾಘವೇಂದ್ರ ನಾಯಕ್
Update: 2021-09-05 04:52 GMT
ಮಂಗಳೂರು, ಸೆ.5: ನಿವೃತ್ತ ಶಿಕ್ಷಕ, ಮಂಚಿಕೆರೆ ರಾಘವೇಂದ್ರ ನಾಯಕ್ (72) ನಗರದ ಖಾಸಗಿ ಆಸ್ಪತ್ರೆಯಲ್ಲಿಂದು ಹೃದಯಾ ಘಾತದಿಂದ ನಿಧನರಾದರು.
ಇವರು ಉಡುಪಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.