ವೈಜ್ಞಾನಿಕ ಮೀಸಲಾತಿಗೆ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಸಮೀಕ್ಷೆ ಯ ಅಗತ್ಯವಿದೆ: ಸಿದ್ದರಾಮಯ್ಯ

Update: 2021-09-06 06:48 GMT

ಬೆಂಗಳೂರು: ವೈಜ್ಞಾನಿಕ ಮೀಸಲಾತಿಗೆ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಸಮೀಕ್ಷೆ ಯ ಅಗತ್ಯವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು,  ಜಾತಿಗಣತಿಗಾಗಿ ಚೆನ್ನೈನ 'ಸಾಮಾಜಿಕ ನ್ಯಾಯದ ಜಂಟಿ ಸಮಿತಿ' ನಡೆಸುತ್ತಿರುವ ಪ್ರದರ್ಶನಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಜಾತಿಗಣತಿ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿಗಣತಿ ವರದಿ ಸ್ವೀಕರಿಸಿ ಚರ್ಚೆಗೆ ಇಡುತ್ತೇವೆ ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. 

ಇದೀಗ 'ನಿಖರ ಮಾಹಿತಿ ಇದ್ದರೆ ಹಿಂದುಳಿದ ಜಾತಿಗಳು ಪರಸ್ಪರ ಸಂಘರ್ಷಕ್ಕಿಳಿಯುವದ‌ನ್ನೂ ತಪ್ಪಿಸಬಹುದು' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News