ರಾಷ್ಟ್ರಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆ: ಕೊಡಗಿನ ಅಪೇಕ್ಷಾ ದೇಚಮ್ಮ ವಲಯಕ್ಕೆ ಪ್ರಥಮ

Update: 2021-09-09 05:59 GMT

ನ್ನಂಪೇಟೆ, ಸೆ.9: ಜೆಸಿಐ ಭಾರತದ ವತಿಯಿಂದ ಕಳೆದ ಆಗಸ್ಟ್  8ರಂದು ದೇಶಾದ್ಯಂತ ಏಕಕಾಲಕ್ಕೆ ಆಯೋಜಿಸಿದ್ದ 'ಜೆಸಿಐ ಭಾರತ ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆ -2021' (NLTS)ರಲ್ಲಿ ಕೊಡಗಿನ ಅಪೇಕ್ಷಾ ದೇಚಮ್ಮ ಜೇಸಿಸ್ ವಲಯ 14ರಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಲಯ14ರಲ್ಲಿರುವ  ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ಮೂಲಕ = ಆನ್ಲೈನ್ ಮೂಲಕ ಪರೀಕ್ಷೆ ಬರೆದ ಗೋಣಿಕೊಪ್ಪಲು ಬಳಿಯ ಕಳತ್ತುಮಾಡಿನ ಲಯನ್ಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಪೇಕ್ಷಾ ದೇಚಮ್ಮ ಇಡೀ ವಲಯದಲ್ಲಿ ಪರೀಕ್ಷೆ ಎದುರಿಸಿದ ಒಟ್ಟು 10507 ವಿದ್ಯಾರ್ಥಿಗಳ ಪೈಕಿ  ಪ್ರಥಮ ಸ್ಥಾನ ಗಳಿಸಿ ಗಮನಸೆಳೆದಿದ್ದಾರೆ. ಜೊತೆಗೆ ಈ ಸಾಧಕ ವಿದ್ಯಾರ್ಥಿ ಆಕರ್ಷಕ ಪಾರಿತೋಷಕ ಸೇರಿದಂತೆ ರೂ.5 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಗೋಣಿಕೊಪ್ಪಲು ಸಮೀಪದ ಕೈಕೇರಿ ನಿವಾಸಿವಿ. ಎಂ. ಲವ ಮತ್ತು ವಿನು ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News