ಬೆಳಗಾವಿ: ರಸ್ತೆ ಅಪಘಾತಕ್ಕೆ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಬಲಿ

Update: 2021-09-09 06:15 GMT

ಬೆಳಗಾವಿ, ಸೆ.9: ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನವೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಪದವಿ ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿಯ ಯಮನಾಪುರ ಸಮೀಪದ ಬರ್ಡೆ ಗಾವಕರಿ ಡಾಬಾ ಬಳಿ ನಡೆದಿದೆ.

ಮೃತರನ್ನು ಚವಾಟ ಗಲ್ಲಿ ನಿವಾಸಿ ಶ್ರೀನಾಥ ದಿಗಂಬರ ಪವಾರ(21) ಹಾಗೂ ಸದಾಶಿವ ನಗರ ನಿವಾಸಿ ರಚಿತ್ ರಂಜನ್(21) ಎಂದು ಗುರುತಿಸಲಾಗಿದೆ.

ಇಲ್ಲಿನ ಲಿಂಗರಾಜು ಕಾಲೇಜಿನಲ್ಲಿ ಇವರಿಬ್ಬರೂ ಬಿ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದರು.

ಇವರಿಬ್ಬರು ಕಳೆದ ರಾತ್ರಿ ಡಾಬಾದಲ್ಲಿ ಊಟ ಮಾಡಿ ಬೈಕಿನಲ್ಲಿ ಮನಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News