ಮಂಡ್ಯ: ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

Update: 2021-09-09 14:32 GMT
ಗಿರೀಶ್

ಮಂಡ್ಯ, ಸೆ.9: ಡೆತ್‌ನೋಡ್ ಬರೆದಿಟ್ಟು ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕು ನಾಗತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವೃತ್ತ ಶಿಕ್ಷಕ ರಾಜು ಹಾಗೂ ಶಿಕ್ಷಕಿ ದೇವಮಣಿ ಪುತ್ರ ಗಿರೀಶ್(32) ಆತ್ಮಹತ್ಯೆ ಮಾಡಿಕೊಂಡ ಯುವಕ. ತನ್ನ ಆತ್ಮಹತ್ಯೆಗೆ ತನ್ನ ತಂದೆತಾಯಿ ಕಿರುಕುಳ ಕಾರಣವೆಂದು ಡೆತ್‌ನೋಟ್‌ನಲ್ಲಿ ಬರದಿದ್ದಾನೆ ಎನ್ನಲಾಗಿದೆ.

ಹನ್ನೊಂದು ವರ್ಷದ ಹಿಂದೆಯೇ ಮದುವೆಯಾಗಿದ್ದ ಗಿರೀಶ್ ದಂಪತಿಗೆ ಮಕ್ಕಳಿರಲಿಲ್ಲವೆನ್ನಲಾಗಿದ್ದು, ಇದಕ್ಕಾಗಿ ತಂದೆತಾಯಿ ನಿಂದಿಸುತ್ತಿದ್ದು, ಮನೆಯಲ್ಲೇ ವಾಸಮಾಡಲು ಅವಕಾಶ ನೀಡಿರಲಿಲ್ಲವೆಂದು ಆರೋಪಿಸಲಾಗಿದೆ.

ಮನೆಯ ಕೊಟ್ಟಿಗೆಯಲ್ಲಿ ಗಿರೀಶ್ ದಂಪತಿ ವಾಸಿಸುತ್ತಿದ್ದರೆಂದು ತಿಳಿದು ಬಂದಿದೆ. ಘಟನೆ ನಂತರ ತಂದೆತಾಯಿ ರಾಜು ಮತ್ತು ದೇವಮಣಿ ತಲೆಮರೆಸಿಕೊಂಡಿದ್ದಾರೆನ್ನಲಾಗಿದ್ದು, ಈ ಸಂಬಂಧ ಬಿಂಡಿಗನವಿಲೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News