'ಸಿದ್ದರಾಮಯ್ಯರಿಂದಲೇ ನಾನು 2 ಬಾರಿ ವಿಧಾನಸಭೆಗೆ ಬಂದೆ' : ಜೆಡಿಎಸ್ ಶಾಸಕ ಶಿವಲಿಂಗೇಗೌಡ

Update: 2021-09-21 17:36 GMT
 ಶಿವಲಿಂಗೇಗೌಡ                              ಸಿದ್ದರಾಮಯ್ಯ 

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರಿಂದಲೇ ನಾನು 2 ಬಾರಿ ವಿಧಾನಸಭೆಗೆ ಬಂದಿದ್ದೇನೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. 

ಸದನದಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಎಚ್.ಡಿ ರೇವಣ್ಣ ಅನುದಾನ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದಾಗ ಶಿವಲಿಂಗೇಗೌಡ ಮಧ್ಯೆ ಪ್ರವೇಶಿಸಿ ರೇವಣ್ಣಗೆ ಒಂದು 10ಕೋಟಿ ಕೊಟ್ಟು ಬಿಡಿ ಇಲ್ಲಾಂದ್ರೆ ಅವರು ನಮ್ಮನ್ನೆಲ್ಲ ಸುಮ್ಮನೆ ಬಿಡಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ ರೇವಣ್ಣ, ಶಿವಲಿಂಗೇಗೌಡರಿಗೆ ಯಡಿಯೂರಪ್ಪ, ಸಿದ್ದರಾಮಯ್ಯ ಬಳಿ ಹೇಗೆ ಮಾತನಾಡಿಸಬೇಕೆಂಬ ಚಾಣಕ್ಯತನ ಇದೆ ಎಂದು ಹೇಳಿದಾಗ ಮತ್ತೆ ಮಧ್ಯ ಪ್ರವೇಶಿಸಿ ಮಾತನಾಡಿದ ಶಿವಲಿಂಗೇಗೌಡ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರಿಂದಲೇ ನಾನು 2ಬಾರಿ ವಿಧಾನಸಭೆಗೆ ಬಂದಿದ್ದೇನೆ. ಇದನ್ನು ಬಹಿರಂಗವಾಗಿಯೇ ಹೇಳುತ್ತೇನೆ ಎಂದರು. ಇದನ್ನು ನಾನು  ಕುಮಾರಣ್ಣ, ದೇವೇಗೌಡರ ಮುಂದೆಯೇ ಹೇಳುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News