ಭಾರತ್ ಬಂದ್‍ ಹಿನ್ನೆಲೆ; ಮುಂಜಾಗೃತ ಕ್ರಮ ವಹಿಸುವಂತೆ ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಆದೇಶ

Update: 2021-09-25 16:00 GMT

ಬೆಂಗಳೂರು, ಸೆ.25: ಕೃಷಿ ವಿರೋಧಿ ಕಾಯ್ದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರಕಾರದ ನೀತಿಗಳನ್ನು ಖಂಡಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಇದೇ ಸೆ.27ರಂದು ಭಾರತ್ ಬಂದ್‍ಗೆ ಕರೆ ನೀಡಿದೆ ರಾಜ್ಯದ ಎಲ್ಲಾ ರೈತ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮ ವಹಿಸಲು ಕೆಎಸ್‍ಆರ್‍ಟಿಸಿಯ ಸಿಬ್ಬಂದಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಹೋಗದಂತೆ ತಡೆಯಲಾಗುವುದು, ವಾಹನಗಳನ್ನು ಜಖಂ ಮಾಡಲಾಗುವುದು, ಸಾರ್ವಜನಿಕ ಬಸ್ ನಿಲ್ದಾಣಗಳಿಗೆ ಧಕ್ಕೆಯಾಗುವ ಕುರಿತು ಕ್ರಮ ವಹಿಸುವಂತೆ ತಿಳಿಸಲಾಗಿದೆ. ಚಾಲಕ, ನಿರ್ವಾಹಕನಿಗೆ ವಾಹನಗಳು ವಾಪಾಸ್ಸಾಗುವವರೆಗೂ ಜಖಂ ಆಗದಂತೆ ನಿಗಾ ವಹಿಸಲು, ಸ್ಥಳಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಬಂದ್ ಸಮಯದಲ್ಲಿ ವಾಹನಗಳು ಜಖಂಗೆ ಒಳಪಟ್ಟ ಬಗ್ಗೆ ಠಾಣೆಗಳಲ್ಲಿ ದಾಖಲಾಗುವ ದೂರು, ಆದಾಯದ ನಷ್ಟದ ಬಗ್ಗೆ ಪ್ರತ್ಯೇಕ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News