ಕಲಬುರಗಿ: ಚಿಂಚೋಳಿಯಲ್ಲಿ ಮತ್ತೆ ಭೂಕಂಪದ ಅನುಭವ

Update: 2021-10-10 06:44 GMT
ಫೈಲ್ ಫೋಟೊ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರವಿವಾರ ಬೆಳಗ್ಗೆ 6.05ಕ್ಕೆ ಭೂಕಂಪದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ಗಡಿಕೇಶ್ವರದ ಸಂತೋಷ್ ಬಾಲೆರ್ ಅವರು ಭೂಮಿಯಿಂದ ಒಂದು ದೊಡ್ಡ ಶಬ್ದವನ್ನು ಕೇಳಿಸಿದೆ. ಇಂದು ಬೆಳಗ್ಗೆ 6.05 ರ ಸುಮಾರಿಗೆ ನಡುಕ ಅನುಭವಿಸಿದೆ ಎಂದು ತಿಳಿದುಬಂದಿದೆ.

ಪಾತ್ರೆಗಳು ಮತ್ತು ಇತರ ವಸ್ತುಗಳು ಕೆಳಗೆ ಬೀಳುತ್ತಿದ್ದಂತೆ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದರು. ನಡುಕ ಅನುಭವಿಸಿದ ಜನರು ಕಳೆದ ಮೂರು ದಿನಗಳಿಂದ ಭಯಭೀತರಾಗಿದ್ದಾರೆ.

ಗಡಿಕೇಶ್ವರ, ಕುಪನೂರು, ಹಾಲಚೇರ, ತೆಗಲತಿಪ್ಪಿ, ಭಂಟನಳ್ಳಿ, ಬೆನಕಲ್ಲಿ, ರಾಯಕೋಡ್, ಭೂತಾಪುರ, ಚಿಂತಪಲ್ಲಿ, ರುಡ್ನೂರು ಮತ್ತು ಇತರ ಗ್ರಾಮಗಳ ನಿವಾಸಿಗಳು ನಡುಕ ಅನುಭವಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News