ಸಕಲೇಶಪುರ: ಹಳ್ಳಕ್ಕೆ ಬಿದ್ದ ಲಾರಿ; ಚಾಲಕ ಸ್ಥಳದಲ್ಲೇ ಮೃತ್ಯು

Update: 2021-10-16 15:05 GMT

ಸಕಲೇಶಪುರ: ತಾಲೂಕಿನ ಕೆಂಪುಹೊಳೆಬಳಿ ಚಲಿಸುತ್ತಿದ್ದ ಲಾರಿಯೊಂದು ಹಳ್ಳಕ್ಕೆ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಡಿದ್ದು , ಕ್ಲೀನರ್ ತೀವ್ರ ಗಾಯಗೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಿರುವ ಘಟನೆ ನಡೆದಿದೆ.

ಮಂಜು (28)ಮೃತಪಟ್ಟ ವ್ಯಕ್ತಿಯಾಗಿದ್ದು, ಲಾರಿ ಕ್ಲೀನರ್ ವೆಂಕಟೇಶ್ (38) ಅವರ ಬಲಗಾಲಿಗೆ ತೀವ್ರ ಗಾಯಗಳಾಗಿದೆ.

ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News