'ನಮ್ಮ ಪಕ್ಷದಲ್ಲಿ ಶಂಖ ಊದುವವರು ಇಲ್ಲ': ಸಚಿವ ಈಶ್ವರಪ್ಪಗೆ ಕುಮಾರಸ್ವಾಮಿ ತಿರುಗೇಟು

Update: 2021-11-22 12:43 GMT

ಮೈಸೂರು: ನಮ್ಮ ಪಕ್ಷದಲ್ಲಿ ಶಂಖ ಊದುವವರು ಇಲ್ಲದಿರಬಹುದು. ಆದರೆ ಜನರ ಕಷ್ಟಗಳಿಗೆ ನೆರವಾಗುವ ಜನರಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಶಂಖ ಊದುವವರು ಇಲ್ಲ, ನಿಮ್ಮ ಬಳಿ ಶಂಖ ಊದುವ ಹಿಂಬಾಲಕರ ಹಿಂಡೇ ಇದೆ. ಅವರು ಅಭಿವೃದ್ಧಿ ಶಂಖ ಊದುತಿಲ್ಲ, ನೀವು 40% ಕಮೀಶನ್ ಪಡೆದು ನುಂಗಿ ಹಾಕಿರುವ ನಿಮ್ಮ ಅಭಿವೃದ್ಧಿಯ ಶಂಖ ಊದುತ್ತಿದ್ದಾರೆ ಎಂದು ಹರಿಹಾಯ್ದರು.

ನಮ್ಮ ಪಕ್ಷದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿ ನೆರವಾಗುವ ಜನರಿದ್ದಾರೆ. ನಿಮ್ಮ ರೀತಿ ಜನರಿಗೆ ಮೋಸಮಾಡುವವರು ಇಲ್ಲ, ಜನರಿಗೆ ಮಂಕುಬೂದಿ ಎರಚಿ ಚುನಾವಣೆ ಸಮಯದಲ್ಲಿ ಜಾದೂ ಮಾಡಿ ಮತಗಳಿಸುವ ತಂತ್ರಗಾರಿಕೆ ನಿಮಗೆ ಇದೆ.‌ ನಿಮಗೆ ಆಕಾಶ ಮಾತ್ರ ಕಾಣುತ್ತಿದೆ ಹೊರತು ಭೂಮಿ ಕಾಣುತ್ತಿಲ್ಲ, ನೆರೆಯಿಂದ ಜನ ಕಷ್ಟಪಡುತ್ತಿದ್ದರೂ ಸ್ಪಂಧಿಸುವ ಔದಾರ್ಯತೆ ಹೊಂದಿಲ್ಲ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News