ಮೈಸೂರು: ಸ್ಕೂಟರ್ ಗೆ ಕಾರು ಢಿಕ್ಕಿ; ಸಹೋದರರಿಬ್ಬರು ಮೃತ್ಯು

Update: 2021-11-22 13:02 GMT

ಮೈಸೂರು: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ಸಾವಿಗೀಡಾದ ಘಟನೆ ಮೈಸೂರಿನ ಇಲವಾಲ ಬಳಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟಿರುವವರನ್ನು ನಂಜನಗೂಡು ತಾಲೂಕು ಹೊಸಕೋಟೆ ಗ್ರಾಮದ ವಿಶ್ವ(21) ಮತ್ತು ಈತನ ತಮ್ಮ ವಿಷ್ಣು (19) ಎಂದು ಹೇಳಲಾಗಿದೆ.

ಅಣ್ಣ ತಮ್ಮಂದಿರಿಬ್ಬರು ಮೈಸೂರಿನಿಂದ ಪಲ್ಸರ್ ಬೈಕ್ ನಲ್ಲಿ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು, ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಅಣ್ಣ ವಿಶ್ವ ಸಾವನ್ನಪಿದರೆ ಈತನ ತಮ್ಮ ವಿಷ್ಣು ಬೈಕ್ ನಿಂದ ಹಾರಿ ಪಕ್ಕದಲ್ಲಿದ್ದ ಕೆರೆಗೆ ಬಿದ್ದಿದ್ದಾನೆ. 

ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕದವರು ಆಗಮಿಸಿ ಕೆರೆಯಿಂದ ವಿಷ್ಣು ಮೃತದೇಹವನ್ನು ಹೊರೆಗೆ ತೆಗೆದಿದ್ದಾರೆ.

ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News