ಹೊಸ ಕೊರೋನ ಪ್ರಬೇಧದಿಂದ ಬಾಧಿತ ದೇಶಗಳಿಂದ ವಿಮಾನಗಳನ್ನು ನಿಲ್ಲಿಸಿ: ಪ್ರಧಾನಿಗೆ ಅರವಿಂದ ಕೇಜ್ರಿವಾಲ್ ಆಗ್ರಹ

Update: 2021-11-27 06:38 GMT

ಹೊಸದಿಲ್ಲಿ: ಬಿ.1.1.529, ಅಥವಾ ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡುವ ದೇಶಗಳಿಂದ ಎಲ್ಲಾ ವಿಮಾನಗಳನ್ನು ನಿಲ್ಲಿಸುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

 "ಹೊಸ ಕೊರೋನ ರೂಪಾಂತರದಿಂದ ಬಾಧಿತವಾಗಿರುವ ದೇಶಗಳಿಂದ ವಿಮಾನಗಳನ್ನು ನಿಲ್ಲಿಸುವಂತೆ ನಾನು ಗೌರವಾನ್ವಿತ ಪ್ರಧಾನಿಯನ್ನು ಕೋರುತ್ತೇನೆ. ಬಹಳ ಕಷ್ಟದಿಂದ ನಮ್ಮ ದೇಶವು ಕೊರೋನದಿಂದ ಚೇತರಿಸಿಕೊಂಡಿದೆ. ಈ ಹೊಸ ರೂಪಾಂತರವು ಭಾರತಕ್ಕೆ ಪ್ರವೇಶಿಸುವುದನ್ನು ತಡೆಯಲು ನಾವು ಎಲ್ಲವನ್ನೂ ಮಾಡಬೇಕು" ಎಂದು ಕೇಜ್ರಿವಾಲ್ ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

"ಆಫ್ರಿಕನ್ ದೇಶಗಳಿಂದ ಹೊಸ ಕೋವಿಡ್ ರೂಪಾಂತರದಿಂದ ಬೆದರಿಕೆ" ಹಿನ್ನೆಲೆಯಲ್ಲಿ ಸೋಮವಾರ ವೈದ್ಯಕೀಯ ಮತ್ತು ವೈಜ್ಞಾನಿಕ ತಜ್ಞರ ಸಭೆಗೆ ಕರೆದಿದ್ದೇನೆ ಎಂದು ಶುಕ್ರವಾರ ಕೇಜ್ರಿವಾಲ್ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News