ಆನೇಕಲ್: ಕಾಂಗ್ರೆಸ್ ಮುಖಂಡನ ಕಚೇರಿ ಮೇಲೆ ಐಟಿ ದಾಳಿ

Update: 2021-12-02 07:40 GMT
 ರಾಮೋಜಿ ಗೌಡ

ಆನೇಕಲ್, ಡಿ.2: ಆನೇಕಲ್ ತಾಲೂಕಿನ ಕಾಂಗ್ರೆಸ್ ಮುಖಂಡ ರಾಮೋಜಿ ಗೌಡ ಅವರ ಎಚ್.ಎಸ್.ಆರ್. ಬಡಾವಣೆಯಲ್ಲಿರುವ ಕಚೇರಿಗೆ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಚ್.ಎಸ್.ಆರ್. ಬಡಾವಣೆಯಲ್ಲಿರುವ ರಾಮೋಜಿ ಗೌಡ ಒಡೆತನದ ಬಿ.ಎಸ್.ಆರ್. ಡೆವಲಪರ್ಸ್ ಕಚೇರಿ ಮತ್ತು ಟುಟೋರಿಯಲ್ಸ್ ಕಚೇರಿಯ ಮೇಲೆ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ 15 ಜನರ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ರಾಮೋಜಿ ಗೌಡರ ನೌಕರರ ಮೊಬೈಲ್ ಸೇರಿದಂತೆ ಅನೇಕ ಕಾಗದ ಪತ್ರ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಯಲ್ಲಿ ನಿಕಟಪೂರ್ವ ಸಂಬಂಧ ಹೊಂದಿರುವ ರಾಮೋಜಿ ಗೌಡ, ಈ ಹಿಂದೆ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News