ಶಿವಮೊಗ್ಗ: 4 ಕಸಾಯಿಖಾನೆಗಳ ಮೇಲೆ ದಾಳಿ; ಇಬ್ಬರ ಬಂಧನ

Update: 2021-12-02 14:46 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ,ಡಿ.02: ತೀರ್ಥಹಳ್ಳಿಯಲ್ಲಿ ಗೋ ಸಾಗಾಟ ವಾಹನವೊಂದನ್ನು ತಡೆಯಲೆತ್ನಿಸಿದವ ಮೇಲೆ ವಾಹನ ಹರಿಸಿದ ಘಟನೆಯ ಬೆನ್ನಲ್ಲೇ  ಶಿವಮೊಗ್ಗದ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಇಲಿಯಾಸ್ ನಗರದ ಸಮೀರ್ ಮತ್ತು ಹುವೇದ್ ಎಂಬುವವರನ್ನು ಬಂಧಿಸಲಾಗಿದ್ದು, ಟಿಪ್ಪುನಗರದ ನಿವಾಸಿಗಳಾದ ಜಬೀರ್ ಉಲ್ಲಾ, ಫೈರೋಜ್, ಅಫ್ರೋಜ್, ಅನ್ನು ಎಂಬುವವರು ತಲೆಮರೆಸಿಕೊಂಡಿದ್ದಾರೆ.

ನಗರದಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ 4 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಮಾಂಸಕ್ಕಾಗಿ ಹಸುಗಳನ್ನು ಕಳ್ಳಸಾಗಾಣಿಕೆ ಮೂಲಕ ತಂದು ಕಟ್ಟಿಹಾಕಿದ್ದ ಮತ್ತು ಮಾಂಸ ಮಾರಾಟ ಮಾಡುತ್ತಿದ್ದ ಒಟ್ಟು 6 ಜನ ಆರೋಪಿಗಳ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ 1 ಹಾಗೂ ತುಂಗಾನಗರ ಠಾಣೆಯಲ್ಲಿ 3 ಸೇರಿ ಒಟ್ಟು 4 ಪ್ರಕರಣಗಳನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News