ಮಡಿಕೇರಿ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Update: 2021-12-09 13:33 GMT

ಮಡಿಕೇರಿ ಡಿ.9 : ಕಾವೇರಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಮೀಪದ ರಾಣಿ ಗೇಟ್ ಬಳಿ ನಡೆದಿದೆ.

ಬೈಲುಕೊಪ್ಪೆ ನಿರಾಶ್ರಿತ ಟಿಬೆಟಿಯನ್ ಶಿಬಿರದ ಬೌದ್ಧ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಾದ ಪೇಮ ಸೇರಿಂಗ್ ಲಕ್ಷ್ಮ (18) ಮತ್ತು ಪೇಮ ಲೆಯಾರೋ (18) ಮೃತಪಟ್ಟ ದುರ್ದೈವಿಗಳು.

ಶಿಬಿರದಿಂದ 5 ಮಂದಿ ಬೌದ್ಧ ಭಿಕ್ಷುಗಳು ಸಮೀಪದ ರಾಣಿ ಗೇಟ್ ಬಳಿ ಮರೂರು ವ್ಯಾಪ್ತಿಯ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭ ಘಟನೆ ಸಂಭವಿಸಿದ್ದು, ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಎಸ್.ಪುಟ್ಟರಾಜು ತಿಳಿಸಿದ್ದಾರೆ.

ಮುಳುಗಿದ ಇಬ್ಬರ ಮೃತದೇಹಗಳನ್ನು ಕುಶಾಲನಗರದ ಮುಳುಗು ತಜ್ಞ ರಾಮಕೃಷ್ಣ ಎಂಬವರು ನದಿಯಿಂದ ಹೊರ ತೆಗೆದರು.

ಬೈಲಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಎಸ್.ಪುಟ್ಟರಾಜು, ಸಿಬ್ಬಂದಿಗಳಾದ ಅಣ್ಣಯ್ಯ, ಮಹಾದೇವ, ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News