ಡಿ.ಕೆ.ಶಿವಕುಮಾರ್, ಕೆಜಿಎಫ್ ಬಾಬು ವಿರುದ್ಧ ಎಸಿಬಿಗೆ ದೂರು

Update: 2021-12-10 11:40 GMT

photo: @INCKarnataka
 

ಬೆಂಗಳೂರು, ಡಿ.10: ಹಣದ ಆಸೆಗಾಗಿ ವಿಧಾನ ಪರಿಷತ್ ಕಾಂಗ್ರೆಸ್‍ಅಭ್ಯರ್ಥಿ ಕೆಜಿಎಫ್ ಬಾಬುಗೆ ಟಿಕೆಟ್ ನೀಡಲಾಗಿದ್ದು, ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಎಸಿಬಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಶುಕ್ರವಾರ ದೂರು ಸಲ್ಲಿಸಿರುವ ಅವರು, ಕೆಜಿಎಫ್ ಬಾಬು ಯಾನೆ ವೈ.ಶರೀಫ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಕ್ರಮ ಜರುಗಿಸುವಂತೆ ಕೋರಿದ್ದಾರೆ.

ಕೆಜಿಎಫ್ ಬಾಬು ಅವರು ಚುನಾವಣಾ ಪ್ರಚಾರದ ವೇಳೆ 500 ಕೋಟಿ ರೂ. ಕೊಡುವ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳನ್ನು ಅಫಿಡವಿಟ್‍ನಲ್ಲಿ ಉಲ್ಲೇಖಿಸಿಲ್ಲ. ಜತೆಗೆ ಆಸ್ತಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News