ಶಿವಮೊಗ್ಗ: ಗಾಂಜಾ ಮಾರಾಟ; ನಾಲ್ವರ ಬಂಧನ

Update: 2021-12-31 16:46 GMT

ಶಿವಮೊಗ್ಗ,ಡಿ.31: ಆಲ್ಕೊಳ ಗ್ರಾಮದ ಕೆರೆ ಏರಿಯ ಮೇಲೆ ದ್ವಿ ಚಕ್ರ ವಾಹನವನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಶುಕ್ರವಾರ ಬಂಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಿವಾಸಿಗಳಾದ ಸದ್ದಾಂ(30), ಶಕೀಲ್ ಮುನಾವರ್(30), ಶಿವಮೊಗ್ಗದ ಎಲ್.ಬಿ.ಎಸ್.ನಗರ ನಿವಾಸಿ ಶ್ರೀಕಾಂತ್ ಅಲಿಯಾಸ್ ರೊನಾಲ್ಡೋ(24), ವೆಂಕಟೇಶ ನಗರ ನಿವಾಸಿ ಸಂತೋಷ್ ಅಲಿಯಾಸ್ ಹಾವಳಿ (26) ಬಂಧಿತರು. ಆರೋಪಿಗಳ ಬಳಿಯಿಂದ ಅಂದಾಜು 45,000 ರೂ. ಮೌಲ್ಯದ ಒಟ್ಟು 1,250 ಗ್ರಾಂ ಗಾಂಜಾ 1,310 ರೂ. ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.

ನಗರದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಶಿವಮೊಗ್ಗ ಗ್ರಾಮಾಂತರ ಪೆÇಲೀಸ್ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದ್ದು ತಂಡವು ಗಸ್ತಿನಲ್ಲಿದ್ದಾಗ ಆರೋಪಿಗಳನ್ನು ವಶಕ್ಕೆ ಪಡೆದಿದೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News