'ಪ್ರಾಮಾಣಿಕ' ಪತ್ರಕರ್ತೆ ಎಂದು ಕರೆದಿದ್ದಕ್ಕೆ ಸಿಟ್ಟಾದ ಆಜ್ ತಕ್ ನ ಅಂಜನ ಓಂ ಕಶ್ಯಪ್ !

Update: 2022-01-11 12:57 GMT
Photo: Twitter/@yadavakhilesh

ಲಕ್ನೋದಲ್ಲಿ ನಡೆದ ಆಜ್ ತಕ್ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಆಜ್ ತಕ್ ನ ಅಂಜನ ಓಂ ಕಶ್ಯಪ್ ಅವರನ್ನು ಆಗಾಗ ' ಪ್ರಾಮಾಣಿಕ ' ಪತ್ರಕರ್ತೆ ಎಂದು ಹೇಳಿದ್ದೇ ನಿರೂಪಕಿಯ ಸಿಟ್ಟಿಗೆ ಕಾರಣವಾಯಿತು.

ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಂಜನ ನೀವು ನನ್ನನ್ನು ಹೀಗೆ ಕರೆಯುವ ಮೂಲಕ ಕುಟುಕುತ್ತಿದ್ದೀರಿ. ನಾನು ಇದನ್ನು ಒಪ್ಪುವುದಿಲ್ಲ ಎಂದು ಹೇಳಿದರು. 

ಈಗ ಈ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆ ಹಾಗೂ ತಮಾಷೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News