ಡಿವೈಎಸ್ಪಿ, ಇನ್ಸ್ ಪೆಕ್ಟರ್ ಸೇರಿ 10 ಅಧಿಕಾರಿಗಳ ವರ್ಗಾವಣೆ ಆದೇಶ ರದ್ದು

Update: 2022-01-17 16:47 GMT

ಬೆಂಗಳೂರು, ಜ.17: ರಾಜ್ಯದ ಆರು ಮಂದಿ ಡಿವೈಎಸ್ಪಿ ಹಾಗೂ ನಾಲ್ವರು ಇನ್ಸ್‍ಪೆಕ್ಟರ್ ಸೇರಿ 10 ಅಧಿಕಾರಿಗಳ ವರ್ಗಾವಣೆ ಆದೇಶವನ್ನು ರಾಜ್ಯ ಸರಕಾರ ರದ್ದುಗೊಳಿಸಿದೆ.

ಇಲ್ಲಿನ ಜೆ.ಸಿ.ನಗರ ಉಪವಿಭಾಗದ ರೀನಾ ಸುವರ್ಣ, ಹಲಸೂರು ಉಪವಿಭಾಗದ ಕುಮಾರ್, ಉತ್ತರ ಸಂಚಾರ ಉಪವಿಭಾಗದ ಗೋಪಾಲ್ ಕೃಷ್ಣ ಗೌಡರ್ ಸೇರಿದಂತೆ ಆರು ಮಂದಿ ಡಿವೈಎಸ್ಪಿ ವರ್ಗಾವಣೆ ರದ್ದುಗೊಳಿಸಲಾಗಿದೆ.

ಅದೇ ರೀತಿ, ಇನ್ಸ್‍ಪೆಕ್ಟರ್‍ಗಳಾದ ಕಾಶಿನಾಥ್, ರಮಕಾಂತ್ ಯಲ್ಲಪ್ಪ ಹುಲ್ಲಾರ್ ಸೇರಿ ನಾಲ್ಕು ಮಂದಿ ಇನ್‍ಸ್ಪೆಕ್ಟರ್‍ಗಳ ವರ್ಗಾವಣೆ ಆದೇಶ ತಡೆಹಿಡಿಯಲಾಗಿದೆ ಎಂದು ಐಜಿಪಿ ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

ಜ.14ರಂದು ಡಿವೈಎಸ್ಪಿ, ಇನ್‍ಸ್ಪೆಕ್ಟರ್ ಸೇರಿ 34 ಮಂದಿ ಪೊಲೀಸರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News