ಯತಿ ನರಸಿಂಹಾನಂದ ವಿರುದ್ಧ ಹೊಸ ಆರೋಪ ದಾಖಲು

Update: 2022-01-17 17:59 GMT

ಡೆಹ್ರಾಡೂನ್, ಜ. 17: ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಮನನೊಂದು ಪತ್ರಕರ್ತ ಹಾಗೂ ಪತ್ರಿಕಾ ಛಾಯಾಚಿತ್ರಗ್ರಾಹಕರನ್ನು ನಿಂದಿಸಿದ ಯತಿ ನರಸಿಂಹಾನಂದರ ವಿರುದ್ಧ ಹೊಸ ಆರೋಪ ಹೊರಿಸಲಾಗಿದೆ.

ಧರ್ಮ ಸಂಸದ್ ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಕುರಿತಂತೆ ದಾಸ್ನಾ ದೇವಾಲಯದ ಮುಖ್ಯ ಅರ್ಚಕನನ್ನು ಈಗಾಗಲೇ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ. ಪತ್ರಕರ್ತ ಸಲ್ಲಿಸಿದ ದೂರಿನ ಆಧಾರದಲ್ಲಿ ದಾಸ್ನಾ ದೇವಾಲಯದ ಅರ್ಚಕನ ವಿರುದ್ಧ ಹೊಸ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಹರಿದ್ವಾರ ನಗರ ಪೊಲೀಸ್ ಠಾಣೆಯ ಎಸ್ಎಚ್ಒ ರಾಂಕಿಂದರ್ ಸಿಂಗ್ ಅವರು ಹೇಳಿದ್ದಾರೆ.

ರವಿವಾರ ಸಂದರ್ಶನದಲ್ಲಿ ಪ್ರಶ್ನೆಯೊಂದರಿಂದ ಮನನೊಂದ ನರಸಿಂಹಾನಂದ ಪತ್ರಕರ್ತರು ಹಾಗೂ ಜೊತೆಗಿದ್ದ ಪತ್ರಿಕಾ ಛಾಯಾಗ್ರಾಹಕರಿಗೆ ಥಳಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಅವರು ತಿಳಿಸಿದ್ದಾರೆ.

ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News