ಬೆಂಗಳೂರು: ಮಹಿಳೆಗೆ ಇನ್‍ ಸ್ಪೆಕ್ಟರ್ ಲೈಂಗಿಕ ಕಿರುಕುಳ ಪ್ರಕರಣ; ತನಿಖೆಗೆ ಆದೇಶಿಸಿದ ನಗರ ಪೊಲೀಸ್ ಆಯುಕ್ತ

Update: 2022-01-20 14:53 GMT
ಇನ್‍ಸ್ಪೆಕ್ಟರ್ ವಸಂತ್ ಕುಮಾರ್

ಬೆಂಗಳೂರು, ಜ.20: ಮಹಿಳೆಯೊಬ್ಬರಿಗೆ ಹೆಣ್ಣೂರು ಠಾಣೆ ಇನ್‍ಸ್ಪೆಕ್ಟರ್ ವಸಂತ್ ಕುಮಾರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

ಕೆಜಿ ಹಳ್ಳಿ ಉಪವಿಭಾಗದ ಎಸಿಪಿ ಜಗದೀಶ ಅವರಿಗೆ ಈ ಕುರಿತು ಆಯುಕ್ತರು ಆದೇಶದಲ್ಲಿ ಸೂಚನೆ ನೀಡಿದ್ದಾರೆ.

ಮಹಿಳೆವೊಬ್ಬರು ಇತ್ತೀಚಿಗೆ ದೂರು ಸಲ್ಲಿಸಿದ್ದರು. ಹಲ್ಲೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದಾಗ ಇನ್‍ಸ್ಪೆಕ್ಟರ್ ದೂರು ಪಡೆದುಕೊಳ್ಳದೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ಥೆ ದೂರಿನಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News