ಕೆ.ವಾಸುದೇವ ರಾವ್

Update: 2022-02-19 17:03 GMT

ಉಡುಪಿ, ಫೆ.19: ಮಟ್ಟು ಕೋಟೆ ನಿವಾಸಿ ನಿವೃತ್ತ ಶಿಕ್ಷಕ ಕೆ.ವಾಸುದೇವ ರಾವ್ (79) ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಸುಮಾರು ಮೂರು ದಶಕಗಳ ಕಾಲ ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ಬೋಧನೆಯ ಮೂಲಕ ಅಪಾರ ಶಿಷ್ಯವೃಂದ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ. ಅವರ ಒಡನಾಡಿಯಾಗಿದ್ದ ನಿವೃತ್ತ ಶಿಕ್ಷಕ ಮೋಹನ್ ಮಾಸ್ಟರ್, ನಿವೃತ್ತ ಮುಖ್ಯ ಶಿಕ್ಷಕಿ ಹೆಲೆನ್ ಟೀಚರ್, ಮುಖ್ಯಶಿಕ್ಷಕಿ ರೇಖಾ ಹಾಗೂ ಶಿಕ್ಷಕ ವೃಂದದವರು ಅಂತಿಮ ದರ್ಶನ ಪಡೆದು ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ