ಕೆ.ಪಿ. ಮುಹಮ್ಮದ್

Update: 2022-03-17 11:47 GMT

ಮಂಗಳೂರು : ಬಜ್ಪೆ ನಿವಾಸಿ, ಉದ್ಯಮಿ ಕೆ.ಪಿ. ಮುಹಮ್ಮದ್ ಯಾನೆ ಪಯಣಿಗ ಉಂಞ (73) ಮಾ.14ರ ತಡರಾತ್ರಿ ಕಿನ್ನಿಪದವಿನಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಹಲವು ವರ್ಷಗಳಿಂದ ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಬಳಿಕ ಊರಿಗೆ ಆಗಮಿಸಿ ಪಯಣಿಗ ಎಂಬ ಹೆಸರಿನ ಬಸ್ಸಿನ ಮಾಲಕರಾಗಿ ಕಾರ್ಯನಿರ್ವಹಿಸತೊಡಗಿದರು. ಹಾಗೇ ಪಯಣಿಗ ಉಂಞ ಎಂಬ ಹೆಸರಿನಿಂದ ಊರಲ್ಲಿ ಗುರುತಿಸಲ್ಪಟ್ಟಿದ್ದರು.

ಬಜ್ಪೆ ಸಮೀಪದ ಕಿನ್ನಿಪದವು ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ