ರೈಲು ಢಿಕ್ಕಿ ಹೊಡೆದು ಮೃತ್ಯು
Update: 2022-05-16 16:23 GMT
ಬ್ರಹ್ಮಾವರ : ರೈಲು ಢಿಕ್ಕಿ ಹೊಡೆದು ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೇ ೧೫ರಂದು ಸಂಜೆ ಚಾಂತಾರು ಎಂಬಲ್ಲಿ ನಡೆದಿದೆ.
ಮೃತರನ್ನು ಹೇರೂರು ಗ್ರಾಮದ ಹೆರಂಜೆ ಕ್ರಾಸ್ ನಿವಾಸಿ ಸೋಮ ನಾಯ್ಕ (೫೫) ಎಂದು ಗುರುತಿಸಲಾಗಿದೆ. ಇವರು ರೈಲು ಹಳಿ ಬಳಿ ಇರುವ ತಮ್ಮ ದೈವದ ಮನೆಗೆ ಹೋಗಲು ಹಳಿ ದಾಟುತ್ತಿರುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿ ಎಸೆಯಲ್ಪಟ್ಟರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.