ಸಾಗರ: ಮಹಿಳೆಯ ಹೊಟ್ಟೆಯಲ್ಲಿದ್ದ 7 ಕೆ.ಜಿ. ಗಡ್ಡೆಯನ್ನು ಹೊರ ತೆಗೆದ ವೈದ್ಯರು

Update: 2022-05-17 11:38 GMT

ಸಾಗರ : ಇಲ್ಲಿನ ನೆಹರೂ ನಗರ ನಿವಾಸಿ ಸೌಮ್ಯ ಡಿಸೋಜ ಅವರ ಹೊಟ್ಟೆಯಲ್ಲಿದ್ದ 7 ಕೆ.ಜಿ. ಗಡ್ಡೆಯನ್ನು ತಾಯಿಮಗು ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಹೊರಗೆ ತೆಗೆದಿದೆ. 

ಸೌಮ್ಯ ಡಿಸೋಜ ಅವರು ಮೇ 10ಕ್ಕೆ ಹೊಟ್ಟೆ ನೋವೆಂದು ತಪಾಸಣೆಗೆ ಬಂದಿದ್ದರು. ಸ್ತ್ರೀರೋಗ ತಜ್ಞ ಡಾ. ನಾಗೇಂದ್ರಪ್ಪ ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದು ಪತ್ತೆಯಾಗಿದ್ದು, ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. 

ಈ ಹಿನ್ನೆಲೆಯಲ್ಲಿ ಮಂಗಳವಾರ ಡಾ. ನಾಗೇಂದ್ರಪ್ಪ, ಡಾ. ಸುಚಿತ್ರ, ಡಾ. ಸುಷ್ಮಾ ಮತ್ತು ಆರೋಗ್ಯ ಸಹಾಯಕರಾದ ನಾಗರತ್ನ, ಸುವರ್ಣ ಮತ್ತು ಚಂದ್ರು ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಸೌಮ್ಯ ಡಿಸೋಜ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News