ಕೊಡಗರಹಳ್ಳಿ: ಕಾರುಗಳ ನಡುವೆ ಅಪಘಾತ: ಓರ್ವ ಮೃತ್ಯು

Update: 2022-05-18 11:05 GMT

ಮಡಿಕೇರಿ ಮೇ 18: ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗರಹಳ್ಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಸುಂಟಿಕೊಪ್ಪ ನಿವಾಸಿ ಮುಸ್ತಫ(47) ಎಂದು ಗುರುತಿಸಲಾಗಿದೆ. ಅವರು ಇಂದು ಬೆಳಗ್ಗೆ ತಮ್ಮ ಕಾರಿನಲ್ಲಿ ಪುತ್ರಿಯನ್ನು ದ್ವಿತೀಯ ಪಿಯು ಪರೀಕ್ಷೆಗೆಂದು ಕುಶಾಲನಗರ ಕಾಲೇಜಿಗೆ ಬಿಟ್ಟು ಸುಂಟಿಕೊಪ್ಪಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.  ಇವರು ಸಂಚರಿಸುತ್ತಿದ್ದ ಕಾರಿಗೆ ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಕಾರು ಢಿಕ್ಕಿಯಾಗಿದೆ.

ಪ್ರವಾಸಿಗರ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News