ಪಿಎಸ್‍ಐ ನೇಮಕಾತಿ ಹಗರಣ: ಆರೋಪಿ ತಂದೆ, ಮಗನ ಜಾಮೀನು ಅರ್ಜಿ ವಜಾ

Update: 2022-05-20 12:01 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಮೇ 20: ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ತಂದೆ, ಮಗನ ಇಬ್ಬರ ಜಾಮೀನು ಅರ್ಜಿಯನ್ನು ಕಲಬುರಗಿಯ 3ನೆ ಜೆಎಂಎಫ್‍ಸಿ ಕೋರ್ಟ್ ತಿರಸ್ಕರಿಸಿದೆ. 

ಪಿಎಸ್‍ಐ ಅಭ್ಯರ್ಥಿಯಾದ ಪ್ರಭು ಮತ್ತು ಆತನ ತಂದೆ ಶರಣಪ್ಪ ಎಂಬುವರು ಜಾಮೀನು ಮಂಜೂರಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಜೆಎಂಎಫ್‍ಸಿ ನ್ಯಾಯಾಲಯ ವಜಾ ಮಾಡಿದೆ. 

ಪ್ರಕರಣವೇನು: ಪಿಎಸ್‍ಐ ಅಭ್ಯರ್ಥಿಯಾಗಿದ್ದ ಪ್ರಭು ಕಲಬುರಗಿ ನಗರದ ಎಂಎಸ್ ಇರಾನಿ ಕಾಲೇಜ್‍ನ ಪರೀಕ್ಷಾ ಕೇಂದ್ರದಲ್ಲಿ ಬ್ಲೂ ಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ವೇಳೆ ಪ್ರಭು ಹಾಗೂ ಅಕ್ರಮಕ್ಕೆ ಸಹಕರಿಸಿದ ಆತನ ತಂದೆ ಶರಣಪ್ಪ ಮತ್ತು ಮಧ್ಯವರ್ತಿ ಚಂದ್ರಕಾಂತ್ ಕುಲಕರ್ಣಿ ವಿರುದ್ಧ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ತಂದೆ-ಮಗ ಇಬ್ಬರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News