ಹನೂರು | ಬೈಕ್ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು

Update: 2022-05-24 05:14 GMT

ಹನೂರು:  ತಾಲೂಕಿನ ಮಲೆಮಹದೇಶ್ವರಬೆಟ್ಟದ ಸಮೀಪದ ಕೊಕ್ಕಬೋರೆ ಕ್ರಾಸ್ ಬಳಿ ಬೈಕ್ ಅಪಘಾತ ಸಂಭವಿಸಿ ಸವಾರನೊಬ್ಬ ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ ನಡೆದಿದೆ. 

ಮೃತ ಚಾಲಕನನ್ನು ತಮಿಳುನಾಡಿನ ಕೊಳತ್ತೂರಿನ ಕಾರ್ತಿಕ್ (25)  ಎಂದು ತಿಳಿದು ಬಂದಿದೆ. 

ದ್ವಿಚಕ್ರವಾಹನದಲ್ಲಿ  ಮಲೆಮಹದೇಶ್ವರಬೆಟ್ಟದಿಂದ ಹನೂರು ಕಡೆಗೆ ಪ್ರಯಾಣಿಸುವಾಗ  ಕೊಕ್ಕಬೋರೆ ಕ್ರಾಸ್ ಬಳಿ  ತಡೆ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ  ಸ್ಥಲದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಮಲೆಮಹದೇಶ್ವರಬೆಟ್ಟದ ಪಿ.ಎಸ.ಐ.ಸಿದ್ದರಾಜು ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷಗೆ ಶವ ರವಾನಿಸಿ ಕೇಸು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News