ಹಿಜಾಬ್ ಗಿಂತ ಸಮವಸ್ತ್ರವೇ ಮುಖ್ಯ ಎಂದವರಿಗೆ ಸಮವಸ್ತ್ರ ಕೊಡಲಾಗದಿರುವುದು ನಾಚಿಕೆಗೇಡಿನ ವಿಷಯ: ಕಾಂಗ್ರೆಸ್ ಟೀಕೆ

Update: 2022-05-26 07:37 GMT

ಬೆಂಗಳೂರು: ಮೊಟ್ಟೆ, ಸೈಕಲ್, ಪುಸ್ತಕ ನೀಡಲು ಯೋಚಿಸದ ಬಿ.ಸಿ ನಾಗೇಶ್ ಶಿಕ್ಷಣ ಸಚಿವರಾಗಿರುವುದು "ಕಳ್ಳನರಿಯೊಂದು ಕಬ್ಬಿನಗದ್ದೆಗೆ ಹೊಕ್ಕಂತಾಗಿದೆ" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿಗೆ ದಲಿತರ, ತಳ ಸಮುದಾಯದ, ಬಡವರ ಮಕ್ಕಳು ಶಿಕ್ಷಿತರಾಗುವುದು ಸುತಾರಾಂ ಇಷ್ಟವಿಲ್ಲ. ಹಿಜಾಬ್ ಇರಬಾರದು ಸಮವಸ್ತ್ರವೇ ಮುಖ್ಯ ಎಂದವರಿಗೆ ಸಮವಸ್ತ್ರ ಕೊಡಲಾಗದಿರುವುದು ನಾಚಿಕೆಗೇಡಿನ ವಿಷಯವಲ್ಲವೇ?' ಎಂದು ಪ್ರಶ್ನಿಸಿದೆ. 

ಇದನ್ನೂ ಓದಿ:  3 ಲಕ್ಷ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಪೂರೈಕೆಯಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News