ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯಲ್ಲ, ಸಮಾನ ಆದಾಯ ಸಂಹಿತೆ ಜಾರಿಗೆ ತರಬೇಕು: ಅಬ್ದುಸ್ಸಲಾಂ ಪುತ್ತಿಗೆ

Update: 2022-05-27 18:40 GMT

ದಾವಣಗೆರೆ :  ನಮ್ಮ ದೇಶದಲ್ಲಿ ಸಮಾನ ನಾಗರೀಕ ಸಂಹಿತೆಯಲ್ಲ, ಸಮಾನ ಆದಾಯ ಸಂಹಿತೆ ಜಾರಿಗೆ ತರಬೇಕು ಈ ನಿಟ್ಟಿನಲ್ಲಿ ಚರ್ಚೆಯಾಗುವ ಅವಶ್ಯಕತೆಯಿದೆ  ಎಂದು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ ಸಲಹೆ ನೀಡಿದರು. 

ನಗರದ ತಾಜ್ ಪ್ಯಾಲೇಸ್‍ನಲ್ಲಿ ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ದಾವಣಗೆರೆಯ ಮೇ ಸಾಹಿತ್ಯ ಮೇಳ ಬಳಗ ಆಶ್ರಯಲ್ಲಿ ಶುಕ್ರವಾರದಿಂದ ‘ಸ್ವಾತಂತ್ರ್ಯ-75: ನೆಲದ ದನಿಗಳು ಗಳಿಸಿದ್ದೇನು? ಕಳಕೊಂಡಿದ್ದೇನು?’ ಎಂಬ ಶೀರ್ಷಿಕೆಯಡಿ ಏರ್ಪಡಿಸಿರುವ 8ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು. 

ದೇಶದ ಪ್ರತಿಯೊಬ್ಬ ಪ್ರಜೆಯ ಆದಾಯ ಎಷ್ಟು ಇದೆ. ಏನು ವ್ಯಾತ್ಯಾಸವಿದೆ ಎನ್ನುವುದರ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕು ಹೊರತು ಈ ಸಮಾನ ನಾಗರೀಕ ಸಂಹಿತೆಯಲ್ಲ. ಇಡೀ ದೇಶದ ಶೇ 70 ರಷ್ಟು ಜನರ ಆದಾಯ ಒಬ್ಬವ್ಯಕ್ತಿಯ ಕೈಯಲ್ಲಿದೆ.  ದೇಶದಲ್ಲಿ ಶೇ 70 ರಷ್ಟು ಜನರುಗೆ ಊಟವಿಲ್ಲ ಅದರ ಬಗ್ಗೆ ಚರ್ಚೆಯಿಲ್ಲ.  ಹೃದಯದ ಬಗ್ಗೆ ಚರ್ಚಿಸದೆ, ಶಿವಲಿಂಗದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಈ ಮೂಲಕ ದೇಶದ ನಿರುದ್ಯೋಗ ಸಮಸ್ಯೆ ಮರೆಮಾಚುತ್ತಿದ್ದಾರೆ. ಮೀಸಲಾತಿ ಬಗ್ಗೆ ಚರ್ಚಿಸಬಾರದು ಎಂದು ಹಿಜಾಬ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮೀಸಲಾತಿ ಫಲಾನುಭವಿಗಳು ಮೀಸಲಾತಿ ವಿರೋಧಿಸುವವರ ಜೊತೆಗೂಡಿ ಕುರುಡರಾಗಿ ಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಂವಿಧಾನ, ಕುವೆಂಪು, ಬಸವಣ್ಣನವರ, ಅಂಬೇಡ್ಕರ ಬಗ್ಗೆ ಚರ್ಚೆಯಾದರೆ ದಿಕ್ಕು ಬದಲಾಗಲಿದೆ ಎನ್ನುವ ನಿಟ್ಟಿನಲ್ಲಿ ಇವರ ಕೋಪ ನಬೀಸಾಬರ ಅಂಗಡಿ ಮೇಲೆ ದಾಳಿ ಮಾಡುವ ಮೂಲಕ ಪೌರುಷ ಮೆರೆದಿದ್ದಾರೆ ಎಂದರು. 

ಮನು-ಸಾರ್ವಕರ್, ಅದಾನಿ, ಅಂಬಾನಿ ಇವರ ವಿರುದ್ದ ಹೋರಾಟಗಳು ನಡೆಯಬೇಕು. ಈ ಬಗ್ಗೆ ಎಲ್ಲಾ ಕಡೆ ಗಂಭೀರ ಚರ್ಚೆಗಳು ನಡೆಯಬೇಕು. ಸ್ವಾತಂತ್ರ ನಮಗೆ ಸಿಗಬೇಕಾದರೆ  ಪದೇ ಪದೇ ಚರ್ಚೆಗಳು ನಡೆಯಬೇಕು ಎಂದು ತಿಳಿಸಿದರು.  

ದೇಶದ ಸ್ವಾತಂತ್ರ ದಿನಾಚರಣೆಗೆ ಸ್ವಲ್ವ ದಿನ ಬಾಕಿಯಿರುವಾಗ ‘ಸ್ವಾತಂತ್ರ್ಯ-75: ನೆಲದ ದನಿಗಳು ಗಳಿಸಿದ್ದೇನು? ಕಳಕೊಂಡಿದ್ದೇನು?’ ಎನ್ನುವ ವಿಚಾರವನ್ನು ಸಾಹಿತ್ಯ ಮೇಳದಲ್ಲಿ ಚರ್ಚೆ ಬಂದಿರುವುದು ಶ್ಲಾಘನೀಯವಾಗಿದೆ. ಸಾಹಿತಿ ಸಿದ್ದಲಿಂಗಯ್ಯನವರ ಯಾರಿಗೂ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ ಕವಿತೆ ಸಾರಂಶದಂತೆ ನಾವು ಸ್ವಾತಂತ್ರ್ಯ ಸಿಕ್ಕಿರುವ ಭ್ರಮೆಯಲ್ಲಿದ್ದೇವೆ. ಅದರೆ, ಸ್ವಾತಂತ್ರ್ಯದಲ್ಲಿ ಇನ್ನು ಆಧುನಿಕ ಗುಲಾಮತನದಲ್ಲಿದ್ದೇವೆ. ಅದರೆ, ನಾವು ಸ್ವಾತಂತ್ರ್ಯರು ಎನ್ನುವ ಭ್ರಮೆಯಲ್ಲಿದ್ದೇವೆ. ಇದು ಗುಲಾಮಗಿರಿಗಿಂತ ಬಹಳ ಅಪಾಯಕಾರಿಯಾಗಿದೆ. ಅರೆ ಪ್ರಜ್ಞಾಸ್ಥಿತಿಯಲ್ಲಿ ಮಾನವ ಜೀವಿಸುತ್ತಿದ್ದಾನೆ. ನಮ್ಮ ಭ್ರಮೆಯಿಂದ ಹೊರ ಬರಬೇಕಾದರೆ ಚರ್ಚೆ,ಸಂವಾದಗಳು ಅವಶ್ಯಕತೆಯಿದೆ. ಇದಕ್ಕೆ ಈ ವೇದಿಕೆ ಅವಕಾಶ ಕಲ್ಪಿಸಿದೆ ಎಂದರು.

ಯಾವ ಸಮಾಜ ಎಷ್ಟು ಸ್ವಾತಂತ್ರ್ಯ, ಆರೋಗ್ಯಕರವಾಗಿದೆ  ಎನ್ನುವುದನ್ನು ಅಳಿಯುವುದಕ್ಕೆ ಮಾಪಕ ಅಂದg,É  ಆ ಸಮಾಜದಲ್ಲಿ ಯಾವ ವಿಷಯಗಳು ಚರ್ಚೆಯಾಗುತ್ತಿವೆ. ಅಲ್ಲದೇ ಸಮಾಜದಲ್ಲಿ ಕೊಟ್ಯಾಂತರ ಮಂದಿ ನಿತ್ಯ ಹಸಿವಿನಿಂದ ನರಳುತ್ತಿದ್ದಾರೆ. ಮನುಷ್ಯರ ಮೂಲಭೂತ ಸ್ವಾತಂತ್ರ್ಯದ ಬಗ್ಗೆ ನಮ್ಮ ಸಮಾಜದಲ್ಲಿ ಎಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಮಾಲಕರು ಇಂತಹ ಮೂಲಭೂತ ಹಕ್ಕುಗಳ ಬಗ್ಗೆ ಚರ್ಚಿಸಬಾರದು ಎಂದು  ಬಯಸುತ್ತಾರೆ. ಹಲವು ವಿಷಯಗಳನ್ನು ಚರ್ಚೆ ಮಾಡದಂತೆ ಅವರ ವಿಷಯಗಳನ್ನು ಚರ್ಚೆಗೆ ಮುಂದುಡುತ್ತಾರೆ. ನಮ್ಮ ವಿಷಯಗಳ ಬಗ್ಗೆ ಚರ್ಚಿಸುವ ಬದಲು ನಮ್ಮ ಪ್ರಭುಗಳು ಹಾಗೂ ಮಾಲೀಕರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ಸಿನಿಮಾ. ಕ್ರಿಕೆಟ್, ಶಾರಕ್ ಖಾನ್ ಹೇರ್ ಸ್ಟೈಲ್, ಸಲ್ಮಾನ ಖಾನ್ ವಾಚ್, ಉಂಗರುದ ಬಗ್ಗೆಯು, ಚಿತ್ರನಟರ ಸಾಕು ಪ್ರಾಣಿಗಳು , ಮಕ್ಕಳ  ಬಗ್ಗೆ ಗಂಟೆ ಗಂಟೆಲೇ ಚರ್ಚೆ ಮಾಡುಲಾಗುತ್ತಿದೆ. ಇದರ ಪರಿಣಾಮ ನಮ್ಮಲ್ಲಿ ನಿರಕ್ಷರತೆ ನಮ್ಮಲ್ಲಿನ ಬಡತನ, ಹಸಿವು, ಬಾಲಕಾರ್ಮಿಕ ಪದ್ದತಿ, ಪೋಷಾಕಾಂಶ ಕೊರತೆಯಿಂದ ಸಾಯುವ ಮಕ್ಕಳ ಚರ್ಚೆ ಬರದಂತೆ ನೋಡಿಕೊಳ್ಳುವುದಾಗಿದೆ ಎಂದರು.  

ನಮಗೆ ಸಿಕ್ಕಿರುವ ಸ್ವಾತಂತ್ರ್ಯದ ಗಂಭೀರವಾಗಿ ಚರ್ಚೆಯಾಗಬೇಕು. ಆಶೋತ್ತರಗಳ ಬಗ್ಗೆ ಚರ್ಚೆಯಾಗಬೇಕು, ಬೇರೆ ಬೇರೆ ವರ್ಗಗಳ ಸಂವೇದನ ಬಗ್ಗೆ ಚರ್ಚೆ ನಡೆಯಬೇಕು. ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಹಕ್ಕುಗಳ ಬಗ್ಗೆ ಚರ್ಚೆಯಾಗಬೇಕು. ಇಲ್ಲದಿದ್ದರೆ ಸ್ವಾತಂತ್ರ್ಯ ಸಿಕ್ಕಿರುವ ಭ್ರಮೆಯಲ್ಲಿ ಇರಬೇಕಾಗುತ್ತದೆ.  ಕಾರ್ಮಿಕರ ಸಮಸ್ಯೆ ಕಾರ್ಮಿಕ ಸಂಘಟನೆಗಳು ಮಾತ್ರ ಚರ್ಚಿಸಬೇಕು, ರೈತರ ಸಮಸ್ಯೆಗಳು ಆ ಸಂಘಟನೆಗಳು ಮಾತ್ರ ಚರ್ಚಿಸಬೇಕು, ದಲಿತರ ಸಮಸ್ಯೆಗಳನ್ನು ಅವರ ಮಾತ್ರ ಚರ್ಚಿಸಬೇಕು. ಅಲ್ಪಸಂಖ್ಯಾತರ  ಸಮಸ್ಯೆಗಳನ್ನು ಅವರು ಮಾತ್ರ ಚರ್ಚಿಸಬೇಕು. ಕೆಳವರ್ಗದ ಸಮಸ್ಯೆಗಳ ಬಗ್ಗೆ ಪರಸ್ಪರ ಜೊತೆಯಾಗಿ ಚರ್ಚಿಸದೆ ಇರುವುದರಿಂದ  ಪರಸ್ಪರ ಹೊಂದಾಣಿಕೆ ಇಲ್ಲದೇ ಸ್ವಾತಂತ್ರ್ಯ ಸಿಕ್ಕರೂ ಇನ್ನೊಬ್ಬರ ಗುಲಾಮ ಪದ್ದತಿ ಉಳಿಯಬೇಕಾಗುತ್ತದೆ ಎಂದು ಹೇಳಿದರು. 

ನಮ್ಮ ಮಾಲಕರು ಮತ್ತು ಪ್ರಭುಗಳು ತಮ್ಮ ಧೋರಣೆಗಳನ್ನು ಬದಲಿಸುವುದಿಲ್ಲ. ನಾವೇ ನಿರ್ಬಂಧಿಸಬೇಕು, ನಮ್ಮ ಕೋಪ, ಅಸಮಾಧಾನ, ಆಕ್ರೋಶ  ತಪ್ಪು ದಾರಿಯಲ್ಲಿದೆ. ಅದಾನಿ, ಅಂಬಾನಿಗಳ ದರೋಡೆಗಳ ಬಗ್ಗೆ ತೋರಿಸಬೇಕಾದ ಆಕ್ರೋಶ , ಕೋಪವನ್ನು ಕಲ್ಲಂಗಡಿ ಮಾರುವ ನಬೀಸಾಬ್ ತೋರಿಸಲಾಗಿದೆ. ಚರ್ಚೆಗಳನ್ನು ಸರಿಯಾದ ದಿಕ್ಕಿನಲ್ಲಿಟ್ಟಿದ್ದರೆ ಖಂಡಿತ ಈ ವ್ಯವಸ್ಥೆ ಬರುತ್ತಿರಲಿಲ್ಲ. ಚರ್ಚೆ ಮಾಡದ ರೀತಿಯಲ್ಲಿ ಪಳಗಿಸಲಾಗಿದೆ. ವ್ಯವಸ್ಥೆಯ ಧಣಿಗಳು ನಮ್ಮ ತಲೆ ಸವರಿದ್ದಾರೆ. ನಮ್ಮ ಆರ್ಥಿಕ ನೀತಿಗಳ ಬಗ್ಗೆ ಚರ್ಚೆಯಾಬೇಕು. ಅದರೆ ಚರ್ಚೆಯಾಗದ ರೀತಿಯಲ್ಲಿ ವಿಷಾಯಾಂತರ ಮಾಡಿಸುತ್ತಿದ್ದಾರೆ ಎಂದು ತಿಳಿಸಿದರು. 

ಭಾರತ ವಿಶ್ವಗುರು ಅಂತ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಒಲಂಪಿಕನಲ್ಲಿ ಚೀನಾ 84 ಪದಕ ಗÀಳಿಸಿದರೆ, ವಿಶ್ವಗುರುವಾದ ಭಾರತ 7 ಪದಕಗಳಿಸಿದೆ.  ಇಷ್ಟೇಲ್ಲಾ ಸಸ್ಯಹಾರ ತಿಂದು. ಯೋಗಾಭ್ಯಾಸ ಮಾಡಿದ  ಬಹಳ ಸಾಧಿಸಬೇಕಿತ್ತು. ಅದರೆ, ಏಕೆ ಹಿಂದುಳಿದರು. ಜನರಿಗೆ ಇವರು ವಿಶ್ವಗುರು ಅಂತ ಮೋಸ ಮಾಡುತ್ತಿದ್ದಾರೆ. ಹಿಂದುಳಿಕೆ ಯಾಕೆ ಚರ್ಚೆ ಮಾಡುತ್ತಿಲ್ಲ. ನಮ್ಮ ವೈಫಲದ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News